ಸಾಧುಗಳನ್ನು ಸಾಯಿಸಿದ ಪಾಪಕರ್ಮದ ಫಲ ಯಾರಿಗೆ ? ಒಂದು ಕಥೆ. ಬಹಳ ಪುರಾತನ ಕಾಲದಲ್ಲಿ ಒಂದು ದಿನ, ಒಂದು ಊರಿಗೆ ಸಾಧುಗಳ ದೊಡ್ಡ ಗುಂಪು ಬಂದಿತ್ತು. ಆ ಊರಿನ ಶಾಸಕ, ಅವರಿಗೆ ಸರಿಯಾದ ಆತಿಥ್ಯ ನೀಡಿ ಅವರಿಂದ ಆಶಿರ್ವಾದ ಪಡೆಯಬೇಕೆಂದು ತನ್ನ ಅತಿಥಿ ಗೃಹದಲ್ಲಿ ಆಶ್ರಯ ನೀಡಿದ. ಮರುದಿನ ಸಿಹಿಯಾದ ಪಾಯಸವನ್ನು ಅವರಿಗೆ ಊಟದಲ್ಲಿ ನೀಡಿ ಅವರನ್ನು ಖುಷಿಪಡಿಸಬೇಕು ಎನ್ನುವ ಉದ್ದೇಶದಿಂದ ತನ್ನ ಸೇವಕನಿಗೆ ಊರ ಹೊರಗಿರುವ ದೂರದ ಗೋ ಶಾಲೆಯಿಂದ ಹಾಲನ್ನು ತರಲು ಹೇಳಿದ. ಸೇವಕ ದೂರದ ಗೋ ಶಾಲೆಗೆ ನಡೆದುಕೊಂಡು ಹೋಗಿ ಹಾಲನ್ನು ಒಂದು ಕೊಡದಲ್ಲಿ ಹೊತ್ತುಕೊಂಡು ಬರುತ್ತಿದ್ದ. ಬರುವಾಗ ದಾರಿ ಮಧ್ಯೆ ಆಯಾಸವಾಯಿತು. ದಣಿವಾರಿಸಿಕೊಳ್ಳಲು ಒಂದು ಗಿಡದ ಕೆಳಗೆ ಕೊಡುವನ್ನಿಟ್ಟು ವಿಶ್ರಾಂತಿ ಮಾಡುತ್ತಿದ್ದ, ಆತನಿಗೆ ಹಾಗೆಯೇ ಸ್ವಲ್ಪ ನಿದ್ರೆ ಆವರಿಸಿತು. ಆ ಸಮಯದಲ್ಲಿಯೇ ಒಂದು ಹದ್ದು ಹಾವನ್ನು ಹಿಡಿದುಕೊಂಡು ಹಾರುತ್ತಾ ಬಂದು ಆ ಗಿಡದ ಮೇಲೆ ಕುಳಿತು ಅದನ್ನು ತಿನ್ನತೊಡಗಿತು. ಆ ಸಮಯದಲ್ಲಿ ಹಾವಿನ ವಿಷದ ಹನಿಗಳು ಆ ಕೊಡದಲ್ಲಿ ಬಿದ್ದವು. ಸ್ವಲ್ಪ ಸಮಯದ ನಂತರ ಸೇವಕನಿಗೆ ಎಚ್ಚರವಾಯಿತು. ನಂತರ ಆ ಹಾಲಿನ ಕೊಡವನ್ನು ಹೊತ್ತುಕೊಂಡು ಶಾಸಕನ ಮನೆಗೆ ಬಂದು ಹಾಲಿನ ಕೊಡವನ್ನು ಅಡುಗೆ ಮಾಡುವವರಿಗೆ ನೀಡಿದ. ಅಡುಗೆ ಮಾಡುವವರು ಮರುದಿನ ಆ ಹಾಲನ್ನೆ ಬಳಸಿ ಪಾಯಸವನ್ನು ಮಾಡಿದರು. ಆ ವಿಷದ ಹಾಲಿನ ಪಾಯ...
Posts
Showing posts from August, 2025