ಒಂದು ಚಿತ್ರ, ಎರಡು ವಿಚಾರಗಳು. ನಮ್ಮ ದೇಹ ಜೀವಂತ ಇರಲು ಮುಖ್ಯವಾಗಿ ಬೇಕಾಗಿರುವುದು ಆಹಾರ. ಆಹಾರದಿಂದಲೇ ನಮ್ಮ ದೇಹ ತಯಾರಾಗುತ್ತದೆ. ಹಾಗೂ ನಮ್ಮ ವಿಚಾರಗಳ ಮೇಲೂ ಆಹಾರ ತಯಾರಿಸಿದವರ ಭಾವನೆ ಪ್ರಭಾವ ಬೀರುತ್ತದೆ. ಇದಕ್ಕಾಗಿಯೇ ನಾವು ಶುದ್ಧವಾದ ಸಾತ್ವಿಕ ಆಹಾರ ಸೇವಿಸಬೇಕು ಎಂದು ಹೇಳಲ್ಪಟ್ಟಿದೆ. ಆಹಾರ ತಯಾರಿಸಿದವರು ಕೆಟ್ಟ ವಿಚಾರಗಳಿಂದ, ದೂಷಿತ ಮನಸ್ಸಿನಿಂದ ಆಹಾರ ತಯಾರಿಸಿದರೆ ಅದನ್ನು ಸೇವಿಸಿದ ಎರಡು ಮೂರು ದಿನಗಳಲ್ಲಿ, ಆಹಾರ ಯಾವ ಭಾವನೆಯಿಂದ ತಯಾರಿಸಿದ್ದಾರೆ, ಆ ಭಾವನೆ ಆಹಾರವನ್ನು ಸೇವಿಸಿದವರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಆಹಾರ ತಯಾರಿಸುವಾಗ ಶುದ್ಧ ಮನಸ್ಸು ಒಳ್ಳೆಯ ಭಾವನೆಯಿಂದ ಆಹಾರ ತಯಾರಿಸಬೇಕು. ಇನ್ನೊಂದು ವಿಷಯ ಆಹಾರವನ್ನು ಸ್ವೀಕರಿಸುವಾಗಲೂ ಆಹಾರವನ್ನು ದೇವರಿಗೆ ಅರ್ಪಿಸಿ ದೇವರ ಪ್ರಸಾದ ಎನ್ನುವ ಭಾವನೆಯಿಂದ ಆಹಾರ ಸೇವಿಸಿದಲ್ಲಿ, ಆ ಆಹಾರ ದೋಷಗಳಿಂದ ಮುಕ್ತವಾಗುತ್ತದೆ. ಹಾಗೂ ಉತ್ತಮ ಆರೋಗ್ಯ ಲಭಿಸುವದರ ಜೊತೆಗೆ, ಉತ್ತಮ ವಿಚಾರಗಳಿಗೆ ಕಾರಣವಾಗಿ ನಮ್ಮ ಜೀವನವನ್ನು ಉನ್ನತಿಯ ಕಡೆಗೆ ಕರೆದುಕೊಂಡು ಹೋಗುತ್ತದೆ, ಎಂದು ದಾರ್ಶನಿಕರು ಹೇಳಿದ್ದಾರೆ. ಇಂದು ಆಹಾರದ ಬಗ್ಗೆ ಬರೆಯುವದಕ್ಕೆ ಕಾರಣ ನಾನು ಇಂದು ಮುಂಜಾನೆ ಊಟ ಮಾಡುವಾಗ ರೊಟ್ಟಿಯಲ್ಲಿ ಕಂಡು ಬಂದ ದೃಶ್ಯ ! ಅದುವೇ, ಸಂಸ್ಕೃತದ ಓಂ ಅಕ್ಷರ. ದಿನಾಲು ದೇವರ ಸ್ಮರಣೆ ಮಾಡಿ, ದೇವರಿಗೆ ಆಹಾರ ಅರ್ಪಿಸ...