Posts

Showing posts from 2024
Image
  *ಒಂದು ಚಿಕ್ಕ ಜೀವ, ಅದೆಷ್ಟು ಉನ್ನತ ಕಾರ್ಯ ?* ಮಹಾಭಾರತದಲ್ಲಿ ಶ್ರೀಕೃಷ್ಣನ ನಂತರ ಶಕ್ತಿಶಾಲಿ ಯಾರಾಗಿದ್ದರೂ ? ಎಂದು ಕೇಳಿದರೆ ಆಗ ಬರುವ ಉತ್ತರವೇನು ?  ಆ ಉತ್ತರವೇ ಬ್ರಹ್ಮಚಾರಿ ಭೀಷ್ಮ. ಅರ್ಜುನ, ಕರ್ಣ ಮಹಾಭಾರತದ ಇನ್ನಿತರ ಯಾರು ಸಹ ಭೀಷ್ಮನ ಶಕ್ತಿಗೆ ಸಮನಾಗಿ ಇರಲಿಲ್ಲ. ಅಷ್ಟೊಂದು ಸಾಮರ್ಥ್ಯ, ಶಕ್ತಿ ಭೀಷ್ಮಾಚಾರ್ಯರಲ್ಲಿತ್ತು. ಯಾರಲ್ಲಿ ಶಕ್ತಿ, ಶ್ರೀಮಂತಿಕೆ, ಅಧಿಕಾರ, ಜ್ಞಾನ ಇರುತ್ತದೆ, ಅವರಲ್ಲಿ ಸುರಕ್ಷತೆಯ ಭಾವ ಇರುತ್ತದೆ. ನಿರ್ಭಯ ಇರುತ್ತದೆ. ಅಂತಹವರು ಯಾರ ಮೇಲೆ ಬೇಕಾದರೂ ಪ್ರಭಾವ ಬೀರಬಹುದು. ತಮಗೆ ಬೇಕಾದ ಕೆಲಸ ಮಾಡಿಕೊಳ್ಳಬಹುದು. ಅಂತಹವರು ಪೂರ್ಣ ಅಲ್ಲದಿದ್ದರೂ ಬಹಳಷ್ಟು ಸ್ವಾತಂತ್ರ್ಯ ಅನುಭವಿಸುತ್ತಿರುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ *ನಮ್ಮಲ್ಲಿ ಬಹಳಷ್ಟು ಜನರಿಗೆ ನಾವು ಸಹ ಶಕ್ತಿಶಾಲಿಯಾಗಬೇಕು, ಶ್ರೀಮಂತರಾಗಬೇಕು, ಅಧಿಕಾರವನ್ನು ಹೊಂದಬೇಕು, ಜ್ಞಾನಿಗಳಾಗಬೇಕು ಎನ್ನುವ ಆಸೆ, ವಿಚಾರ. ಇದಕ್ಕೆ ಸಂಬಂಧಿಸಿದ ಪ್ರಯತ್ನ ಸಹ ನಮ್ಮಲ್ಲಿ ಇರುತ್ತದೆ*.  ಆದರೆ *ಶಕ್ತಿ ಹೊಂದುವುದು, ಶ್ರೀಮಂತಿಕೆ ಹೊಂದುವುದು, ಅಧಿಕಾರ ಹೊಂದುವುದು, ಜ್ಞಾನ ಹೊಂದುವುದು ಕೇವಲ ನಮ್ಮ ಸಲುವಾಗಿ ಮಾತ್ರವೇ ?* ನಮ್ಮ ಸಲುವಾಗಿ ಇವುಗಳನ್ನು ಪಡೆಯಬೇಕು ಎಂದು ನಾವು *ಇವುಗಳನ್ನು ಪಡೆದರೂ, ನಮಗೆ ಗೊತ್ತಿಲ್ಲದೆ ಇವುಗಳಿಗೆ ಸಂಬಂಧಿಸಿದ ಒಂದು ಜವಾಬ್ದಾರಿ ತನ್ನಿಂದ ತಾನೇ ನಮಗೆ ಬರುತ್ತದೆ*.  ಈ ವಿಷಯವನ್ನು ಯಾರು ತಿಳಿದುಕ...
 ಧನ್ಯವಾದಗಳು ಒಬ್ಬ ರಾಜನಿಗೆ ಕೆಟ್ಟದ್ದು ಆದಾಗ ಅವನ ಮಂತ್ರಿ ದುಃಖ ಪಡಬೇಕೇ ? ಸಂತೋಷ ಪಡಬೇಕೇ? ರಾಜನಿಗೆ ತೊಂದರೆ ಆದಾಗ ಸಂತೋಷ ಪಡುತ್ತಾನೆ.  ಮುಂದೇನಾಯಿತು.... ರಾಜ ಮಂತ್ರಿಯ ಪುಟ್ಟ ಕಥೆ ಒಬ್ಬ ರಾಜನ ಉಗುರುಗಳನ್ನು ಕ್ಷೌರಿಕ ಕತ್ತರಿಸುವಾಗ ಕತ್ತಿಯು ರಾಜನ ಬೆರಳಿನ ಸ್ವಲ್ಪ ಭಾಗವನ್ನು ಕತ್ತರಿಸಿ ಬಿಡುತ್ತದೆ.  ಆಗ ಅಲ್ಲಿಯೇ ಇರುವ ಮಂತ್ರಿ ಇದ್ದಕ್ಕಿದ್ದಂತೆ ಖುಷಿಯಿಂದ, ದೇವರೇ ! ಬಹಳ ಒಳ್ಳೆಯದಾಯಿತು. ನಿಮಗೆ ಅನಂತ ಧನ್ಯವಾದಗಳು ಎನ್ನುತ್ತಾನೆ. (ಇಂತಹ ಸ್ಥಿತಿಯಲ್ಲಿ ರಾಜನ ಸ್ಥಾನದಲ್ಲಿ ನಾವು ನೀವು ಇದ್ದರೆ ಏನು ಮಾಡುತ್ತಿದ್ದೆವು?) ನಿರೀಕ್ಷೆಯಂತೆ ರಾಜ ಮಂತ್ರಿಯನ್ನು ರಾಜ್ಯದಿಂದ ಗಡಿಪಾರು ಮಾಡುತ್ತಾನೆ. ಸ್ವಲ್ಪ ದಿನಗಳ ನಂತರ ರಾಜ ಬೇಟೆಯಾಡಲು ಸೈನಿಕರೊಂದಿಗೆ ಕಾಡಿಗೆ ಹೋಗುತ್ತಾನೆ. ಆಗ ದಟ್ಟವಾದ ಕಾಡಿನಲ್ಲಿ ಸೈನಿಕರು ರಾಜ ಬೇರ್ಪಟ್ಟು, ರಾಜ ಒಂಟಿಯಾಗುತ್ತಾನೆ.  ಆಗ ರಾಜ, ದೇವಿಯ ಆರಾಧನೆ ಮಾಡುತ್ತಿರುವ ಕಾಡು ಜನರಿಗೆ ಸಿಗುತ್ತಾನೆ. ಅವರು ರಾಜನನ್ನು ಕಂಡು ದೇವಿಯ ಬಲಿಗೆ ಒಳ್ಳೆಯ ಬೇಟೆಯೇ ಸಿಕ್ಕಿತ್ತು, ಎಂದು ಖುಷಿಪಡುತ್ತಾರೆ. ರಾಜನನ್ನು ಬಲಿ ಕೊಡಲು ಸಿದ್ಧಪಡಿಸಿ, ಕೊನೆಯದಾಗಿ ಆತನ ದೇಹದಲ್ಲಿ ಯಾವುದೇ ನ್ಯೂನತೆ ಇಲ್ಲ, ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಇಡೀ ದೇಹವನ್ನು ನೋಡಿದಾಗ, ಬೆರಳಿನ ಭಾಗ ಕತ್ತರಿಸಿರುವುದು ನೋಡಿ ರಾಜ ಬಲಿಗೆ ಯೋಗ್ಯನಲ್ಲ ಎಂದು ತಿಳಿದು ಆತನನ್ನು ಬಿಟ್ಟುಬಿಡುತ್ತಾರೆ. ಆಗ ರಾಜ...
Image
ರಥ ಸಂದೇಶ   ಮುಖ ಪುಸ್ತಕದಲ್ಲಿ (Facebook) ನಿಜವಾದ ಜ್ಞಾನವನ್ನು ಪಡೆಯಬೇಕು ಎನ್ನುವ ಆಸಕ್ತಿ ಇರುವ ಜನರು ಬಹಳ ಕಡಿಮೆ. ಆದರೂ ಆಸಕ್ತಿ ಇರುವ ಕೆಲವರಿಗಾದರೂ ಸತ್ಯ  ಜ್ಞಾನದ ಸಂಗ ಸಿಗಲಿ ಎನ್ನುವ  ಉದ್ದೇಶ್ಯದಿಂದ ಈ ಚಿತ್ರವನ್ನು ಪೋಸ್ಟ ಮಾಡಿದ್ದೆ. ಇದಕ್ಕೆ ಮೆಚ್ಚುಗೆಗಳನ್ನು ನೀಡಿದ ಜ್ಞಾನಾಸಕ್ತರಿಗೂ ಹಾಗು ತಮ್ಮ ಪ್ರತಿಕ್ರಿಯೆ ಮೂಲಕ ಚಿತ್ರದ ವಿಷಯ "ಏನು ಇರಬಹುದು" ಎಂದು  ತಿಳಿಸಲು ಪ್ರಯತ್ನಿಸಿದವರಿಗೂ ಅನಂತ ಧನ್ಯವಾದಗಳು. ನಾನು ನಮ್ಮ ಸಂಸ್ಕಾರ ಕೇಂದ್ರದ ಮಕ್ಕಳಿಗೆ ಯಮನು ನಚಿಕೇತನಿಗೆ ಕೊಟ್ಟ ಜ್ಞಾನವನ್ನು ತಿಳಿಸಿ ಹೇಳುತ್ತಿದ್ದೆ. ಆಗ ನನಗೆ ಬಂದ ಯೋಚನೆಯೆಂದರೆ ಮುಖ ಪುಸ್ತಕದ Facebook  ಜ್ಞಾನಾಸಕ್ತರಿಗೂ ಈ ಜ್ಞಾನ ಸಿಗಲಿ ಎನ್ನುವ ವಿಚಾರ. ಆದ ಕಾರಣ ಈ ಚಿತ್ರವನ್ನು ನಾನು ಇಲ್ಲಿ ಪೋಸ್ಟ ಮಾಡಿದೆ. ಈಗ ಈ ಚಿತ್ರದ ಕುರಿತು ಹೇಳುತ್ತೇನೆ. ಚಿತ್ರದಲ್ಲಿ ಒಂದು ರಥ ಇದೆ. ಐದು ಕುದುರೆಗಳಿವೆ. ರಥದ ಯಜಮಾನ ರಥದಲ್ಲಿ ಕುಳಿತಿದ್ದಾನೆ. ಸಾರಥಿ ರಥ ಓಡಿಸುತ್ತಿದ್ದಾನೆ. ಆತನ ಕೈ ಯಲ್ಲಿ ಐದು ಕುದುರೆಗಳ ಲಗಾಮುಗಳಿವೆ. ರಥದ ಆಕಡೆ ಈಕಡೆ ಕುದುರೆಗೆ ಪ್ರಿಯವಾದ ಹಸಿರು ಮರಗಳಿವೆ.  ಒಂದು ವೇಳೆ ಸಾರಥಿ ಲಗಾಮು ಸರಿಯಾಗಿ ಹಿಡಿಯದಿದ್ದರೆ, ಕುದುರೆಗಳು ತಮಗೆ ಪ್ರಿಯವಾದ ಹಸಿರನ್ನು ತಿನ್ನಲು ಹೋಗುತ್ತವೆ. ಆಗ ರಥ ಮುರಿದು ಬೀಳುತ್ತದೆ. ರಥದಲ್ಲಿ ಕುಳಿತಿರುವ ಯಜಮಾನ ಅಪಾಯಕ್ಕೊಳಗಾಗುತ್ತಾನೆ. ಆಗ  ಅವನ ಪ್ರಯಾಣ ...
Image
ಒಳಗಿನವರು ? ಹೊರಗಿನವರು ? ಅಥವಾ ಅನಿಕೇತನ ? ಅದೊಂದು ಸೂರ್ಯ ದೇಶ. ಅಲ್ಲಿ ‌ ಕಲ್ಲು ಪುಷ್ಪಗಳಲ್ಲಿ ಅರಳಿದ ಸುಂದರ, ಸಂಪದ್ಭರಿತ ನಗರ ಕೇಂದ್ರಿತ ಸೀಮೆಕಮಲಾವತಿ ರಾಜ್ಯ. ಅದನ್ನು ಶರಣರಾಜರು ರಾಜ್ಯಭಾರ ಮಾಡುತ್ತಿದ್ದರು. ಆ ರಾಜ್ಯದಲ್ಲಿ ಅನೇಕ ಗುರುಕುಲಗಳು ವಿದ್ಯೆ ನೀಡುತ್ತಿದ್ದವು. ಅವುಗಳಲ್ಲಿ ನಂದಿ ಶಾಲೆಯೆನ್ನುವ ಪುರಾತನ ಗುರುಕುಲವಿತ್ತು. ಅದು ವಿದ್ಯೆ ಜೊತೆಗೆ ಉತ್ತಮ ಗುಣಗಳನ್ನು ಮಕ್ಕಳಲ್ಲಿ ಬಿತ್ತುವುದಕ್ಕೆ ಗುರುತಿಸಲ್ಪಡುತಿತ್ತು. ಶರಣರಾಜ ಮಂಡಲದಲ್ಲಿ ಪ್ರಭಾವಿ ನಾಯಕರಾಗಿದ್ದ ಅನೇಕರ ಮಕ್ಕಳು ಅಲ್ಲಿ ವಿಧ್ಯೆ ಕಲಿಯುತ್ತಿದ್ದರು. ಅವರಲ್ಲಿ ರವಿತೇಜ ಎನ್ನುವ ವಿಧ್ಯಾರ್ಥಿಯೂ ಇದ್ದ. ಆತನಲ್ಲಿ ಅಲ್ಲಿನ ಗುರುಗಳ ಬಗ್ಗೆ ಗೌರವ ಶ್ರದ್ಧೆ ಇತ್ತು. ಅವರಿಂದ ಅನೇಕ ಉತ್ತಮ ಗುಣಗಳನ್ನು ಆತ ಕಲಿತ. *ಇದರ ಪರಿಣಾಮ ಆತನಲ್ಲಿ ತನ್ನ ಗುರುಕುಲದ ಬಗ್ಗೆ ಎಲ್ಲಿಲ್ಲದ ಪ್ರೇಮ, ಪ್ರೀತಿ, ಗೌರವಾದರ ತುಂಬಿ ತುಳುಕುತ್ತಿತ್ತು*.  *ಆತ ಎಲ್ಲಿಯೇ ಹೋಗಲಿ ತನ್ನ ಗುರುಕುಲದ ಬಗ್ಗೆ ವರ್ಣನೆ ಮಾಡಿ ಹೊಗಳುತ್ತಿದ್ದ. ತನ್ನನ್ನು ಬೇರೆಯವರು ಬಾವಿಯ ಕಪ್ಪೆಯೆಂದರೂ ತನ್ನ ಗುರುಕುಲದ ಶ್ರೇಷ್ಠತೆ ಕುರಿತು ಮಾತನಾಡುವದನ್ನು ಆತ ಬಿಡುತ್ತಿರಲಿಲ್ಲ*. ಕಾಲಚಕ್ರ ಉರುಳಿತು. ಆತನ ವಿದ್ಯೆಯ ಏರುಗತಿಯೂ ಕಾರಣಾಂತರದಿಂದ ಕೆಳಮುಖವಾಯಿತು. ಆದರೂ ಗುಣಗಳ ವಿಚಾರದಲ್ಲಿ ಆತನು ಕಿಂಚಿತ್ತು ಕಡಿಮೆ ಆಗಿರಲಿಲ್ಲ.  ಗುರುಕುಲದಿಂದ ಹೊರಬಂದ ನಂತರ ತಾನಿರುವ ಸ್ಥಳದಲ್ಲಿ ಉಚಿತವಾಗ...
Image
 ಅಲ್ಪ ಕಲ್ಪನೆ ಅಲ್ಪ ಸತ್ಯ ಭಾಗ 4 (ಶಿಕ್ಷಕ)  ಭಾಗ -3 ಲಿಂಕ್ 👇 https://urainpoems.blogspot.com/2024/09/3-2-httpsurainpoems.html (ಹಿಂದಿನ ಸಂಚಿಕೆಯಲ್ಲಿ : ಜಗತ್ತಿನ ಸಮಸ್ಯೆಗಳಿಗೆ ಯಾವುದೇ ರೀತಿಯ ಸೂಕ್ತ ಪರಿಹಾರ ಕಾಣದಿದ್ದಾಗ, ದೇಶಮುಖ್ ಸರ್ ಈ ಉದ್ದೇಶದಿಂದಲೇ ಸುರೇಶ ತನ್ನ ಮುಂದಿನ ಜೀವನದ ಉದ್ದೇಶವನ್ನು ಘೋಷಣೆ ಮಾಡಿದ್ದಾನೆ ಎಂದು ನೆನಪಾಗಿ ಡಾ. ನಾಗೇಶ ಗೆ ಸುರೇಶನನ್ನು ಕರೆ ಮಾಡಿ ಕರೆಯಲು ಹೇಳುತ್ತಾರೆ. ನಂತರ.... ) ಆಗ ಡಾ. ನಾಗೇಶ ಸುರೇಶನಿಗೆ ಕರೆ ಮಾಡಿ ಬರಲು ಹೇಳುತ್ತಾರೆ.  ಆಗ ರಾಜೇಶ, ವಿಜ್ಞಾನ ವಿಭಾಗದಲ್ಲಿ ನಿಮ್ಮ ಜೊತೆ ಇದ್ದ ಸುರೇಶ ಏನು ? ಎಂದು ಕೇಳಿದ. ಆಗ ಹೌದು ಎಂದು ನಾಗೇಶ ಹೇಳಿದರು. ಆಗ ರಾಜೇಶ, *ಈ ಬಾರಿ ಸುರಕ್ಷೆ ಕುರಿತು ನಮ್ಮ ಸಂಸ್ಥೆಯವರು ಆತನನ್ನು ಅತಿಥಿಯಾಗಿ ಕರೆದಿದ್ದ ಕಾರ್ಯಕ್ರಮದಲ್ಲಿ ಆತ ಬಹಳ ಚೆನ್ನಾಗಿ ಮಾತನಾಡಿದ್ದ*, ಎಂದು ನಮ್ಮ ಹುಡುಗರು ಹೇಳುತ್ತಿದ್ದರು ಎಂದು ಹೇಳಿದ. ಆಗ ಡಾ. ನಾಗೇಶ, ಹೌದು ನೀವು ಆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಾನು ಸಹ, ಆತ ಪ್ರಥಮ ಬಾರಿಗೆ ಬೇರೆ ಸ್ಥಳದ ದೊಡ್ಡ ವೇದಿಕೆಯಲ್ಲಿ ಆ ರೀತಿಯಾಗಿ ಮಾತನಾಡಿದ್ದು ನೋಡಿದೆ.  *ಆಗ ನನಗೆ ನಮ್ಮ ಹೈಸ್ಕೂಲಿನ ಘಟನೆ ನೆನಪಾಯಿತು. ಆ ಘಟನೆ ನಂತರ ಆತ ಮುಂದೆ ಮಾತನಾಡುತ್ತಾನೆಯೋ ? ಇಲ್ಲವೋ ಎನ್ನುವ ಭಾವನೆ ಹಲವರಲ್ಲಿ ಮೂಡಿತ್ತು*. ಆದರೆ ಈಗ ದೊಡ...
Image
 ಅಲ್ಪ ಕಲ್ಪನೆ ಅಲ್ಪ ಸತ್ಯ - ಭಾಗ 3 (ಜಗತ್ತಿನ ಸಮಸ್ಯೆಗಳು) ಭಾಗ 2ರ ಲಿಂಕ್👇 https://urainpoems.blogspot.com/2024/09/2-4-1-httpsurainpoems.html ದೇಶಮುಖ್ ಸರ್ ಡಾ. ನಾಗೇಶ ಮೊಬೈಲ್ ನಲ್ಲಿದ್ದ ಸುರೇಶನು ಬರೆದ ಶ್ರದ್ಧಾಂಜಲಿ ಕವಿತೆ ಓದಿ ಅನೇಕ ಯೋಚನೆಗಳಲ್ಲಿ ಮುಳುಗಿರುವಾಗಲೇ, *ಆ ಮೋಬೈಲ್ ರಿಂಗ್ ಆಯಿತು ಹಾಗೂ ಅದರಲ್ಲಿ R.Chakravarti ಎನ್ನುವ ಹೆಸರು ಇರುವುದನ್ನು ನೋಡಿ ಮೊಬೈಲ್ ನ್ನು ಡಾ. ನಾಗೇಶ ಗೆ ನೀಡಿದರು. ನಾಗೇಶ ಮಾತನಾಡುವುದನ್ನು ಮುಗಿಸಿದ ನಂತರ, ಮಾತನಾಡಿದ್ದು ನಮ್ಮ ರಾಜೇಶ ಅಲ್ಲವೇನು ?* ಎಂದು ಊಹೆ ಮಾಡುತ್ತಾ ದೇಶಮುಖ್ ಸರ್ ಕೇಳಿದರು. ಆಗ ಹೌದು ರಾಜೇಶ್ ಮಾತನಾಡಿದ್ದ. ಒಂದು ಗಂಭೀರ ವಿಷಯದ ಬಗ್ಗೆ ಮಾತನಾಡಲು ಬರುತ್ತೇನೆ ಎಂದು ಹೇಳಿದ್ದಾನೆ, ಎಂದರು. ಡಾ. ನಾಗೇಶ, ಸುರೇಶ, ರಾಜೇಶ ಚಕ್ರವರ್ತಿ ಒಂದೇ ಶಾಲೆ, ಒಂದೇ ಕಾಲೇಜಿನಲ್ಲಿ ಪಿಯುಸಿ ವರೆಗೆ ಕಲಿತವರು. *ನಾಗೇಶ, ಸುರೇಶ ವಿಜ್ಞಾನ ವಿಭಾಗದಲ್ಲಿ ಇದ್ದರೆ, ರಾಜೇಶ ಕಲಾ ವಿಭಾಗದಲ್ಲಿದ್ದ. ಬೇರೆ ಬೇರೆ ವಿಭಾಗವಿದ್ದರೂ ಡಾ. ನಾಗೇಶ, ರಾಜೇಶ ಒಂದು ಸರ್ಕಾರೇತರ ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು*. ಹೀಗಾಗಿ ಅವರಲ್ಲಿ ಆಪ್ತತೆ, ಪರಸ್ಪರ ಗೌರವ ಇತ್ತು.  ಸ್ವಲ್ಪ ಸಮಯದಲ್ಲಿಯೇ, ನಮಸ್ಕಾರ ನಾಗೇಶ ಎಂದು ರಾಜೇಶ ಒಳ ಬಂದರು. ಅಲ್ಲಿಯೇ ದೇಶಮುಖ ಸರ್ ಕುಳಿತಿರುವುದನ್ನು ಕಂಡು ಆಶ್ಚರ್ಯದಿಂದ ನಮಸ್ಕಾರ ಸರ್, ಏನು ನೀವು ಇಲ್ಲಿ !!! ? ಎಂದು ಕೇ...
Image
 ಅಲ್ಪ ಕಲ್ಪನೆ ಅಲ್ಪ ಸತ್ಯ (ಭಾಗ 2) ( ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ -ಸರಣಿಯ 4ನೇ ಲೇಖನ)  ಭಾಗ 1ರ ಲಿಂಕ್ https://urainpoems.blogspot.com/2024/09/1.html ಅಲ್ಪ ಸಮಯದ ನಂತರ ಡಾ. ನಾಗೇಶ ತಮ್ಮ ಕೊಠಡಿಗೆ ವಾಪಸ್ಸಾದರು. ಆಗ ದೇಶಮುಖ್ ಸರ್, ಸುರೇಶ ಅಲ್ಲ ಎನ್ನುವ ಉತ್ತರವೇ ಬರಲಿ ಎಂದು ಬಯಸುತ್ತಾ, *ಸುರೇಶ ಅಲ್ಲ ತಾನೇ ? ಎಂದು ಡಾ ನಾಗೇಶಗೆ ಕೇಳಿದರು*.  *ಆಗ ಡಾ ನಾಗೇಶ, ಸುರೇಶನೇ ಬಂದಿದ್ದು, ಎಂದು ಹೇಳುತ್ತಿದ್ದರು.... ಅಷ್ಟರಲ್ಲಿಯೇ* ಅವರ ಫೋನ್ ರಿಂಗಣಿಸಿತು. ಇದನ್ನು ಕೇಳಿ ಚಿಂತಾಕ್ರಾಂತರಾದ ದೇಶಮುಖ ಸರ್ ಗಡಿಬಿಡಿಯಿಂದ ಯಾವ ವಾರ್ಡ್ ನಲ್ಲಿ ಇದ್ದಾರೆ ನಾನು ನೋಡುತ್ತೇನೆ ಎಂದು ಎದ್ದು ರೂಮ್ ನ ಹೊರಗೆ ಹೋಗಲು ಅಣಿಯಾದರು. ಆಗ ಡಾ. ನಾಗೇಶ ಫೋನ್ ನಲ್ಲಿ ಮಾತನಾಡುತ್ತಲೇ ಕುಳಿತುಕೊಳ್ಳಿ ಎನ್ನುವಂತೆ ಕೈ ಸನ್ನೆ ಮಾಡಿದರು.  *ಆಗ ದೇಶಮುಖ್ ಸರ್ ಪೇಷಂಟ್ ಸುರೇಶ ಆಗಿರಬಾರದು ಎಂದು ನಾನು ದೇವರಿಗೆ ಬೇಡಿಕೊಂಡದ್ದು ವ್ಯರ್ಥವಾಯಿತು, ಎಂದು ಹಳಹಳಿಸಿದರು*. ಫೋನ್ ನಲ್ಲಿಯ ಮಾತುಕತೆ ಮುಗಿದ ನಂತರ ಡಾ. ನಾಗೇಶ, ದೇಶಮುಖ್ ಸರ್ ಪರಿಸ್ಥಿತಿ ನೋಡಿ, "ಟೆನ್ಷನ್ ಮಾಡಿಕೊಳ್ಳಬೇಡಿ ಸರ್, ನೀವು ಅಂದುಕೊಂಡಂತೆ ಏನು ಆಗಿಲ್ಲ ಸರ್. ಬಂದಿದ್ದು ಸುರೇಶ ಏನೋ ನಿಜ, ಆದರೆ ಸುರೇಶನಿಗೆ ಏನು ಆಗಿರಲಿಲ್ಲ. *ಸುರೇಶನ ಮನೆಯ ಹಿಂದಿನ ಹುಡುಗಿಗೆ ಹಾವು ಕಚ್ಚಿತ್ತು. ಆಕೆಗೆ ಅತ್ಯಲ್ಪ ಸಮಯದಲ್ಲಿ ಚಿಕಿತ್ಸೆ ದೊರೆತಲ್ಲಿ...
Image
  ಅಲ್ಪ ಕಲ್ಪನೆ, ಅಲ್ಪ ಸತ್ಯ ಕಥೆ ಭಾಗ -1 (ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ, ಸರಣಿಯ ಮೂರನೇ ಲೇಖನ.) ನಾಗೇಶ ಮತ್ತು ಸುರೇಶ ಇಬ್ಬರು ಬಾಲ್ಯ ಸ್ನೇಹಿತರು. ಬಾಲ್ಯದಿಂದಲೂ ಇಬ್ಬರೂ ಅನೋನ್ಯ ಸಂಬಂಧವನ್ನು ಹೊಂದಿದವರು. ಓದಿನಲ್ಲಿ, ಕ್ರೀಡೆಯಲ್ಲಿ, ಇನ್ನಿತರ ಸ್ಪರ್ಧೆಗಳಲ್ಲಿ ತರಗತಿ ಮತ್ತು ಶಾಲೆಯಲ್ಲಿಯೇ ಗುರುತಿಸುವಂತಹವರು. ಬೇರೆಯವರಿಗೆ ಒಂದು ರೀತಿ ಪರಸ್ಪರ ಸ್ಪರ್ಧಿಗಳಂತೆ ಕಂಡರು ಸಹ ಎಂದಿಗೂ ತಮ್ಮ ತಮ್ಮಲ್ಲಿ ಮತ್ಸರ ಪಡದೆ ಓದಿನಲ್ಲಿ ಇತರ ವಿಷಯಗಳಲ್ಲಿ ಒಬ್ಬರಿಗೊಬ್ಬರು ಸಹಕಾರ ಕೊಟ್ಟುಕೊಳ್ಳುತ್ತಿದ್ದರು.. ಸುರೇಶ, ನಾಗೇಶನನ್ನು ಆದರ್ಶ ವಿದ್ಯಾರ್ಥಿಯಂತೆ ಕಾಣುತ್ತಿದ್ದ. ನಾಗೇಶ ಸಹ ಕೆಲವು ವಿಷಯಗಳಲ್ಲಿ ಸುರೇಶನನ್ನು ಅನುಸರಿಸುತ್ತಿದ್ದ. ನಾಗೇಶನ ಜೀವನ ಬಾಲ್ಯದಲ್ಲಿ ಎಲ್ಲರೂ ಅಂದುಕೊಂಡಂತೆ ಏರುಗತಿಯಲ್ಲಿಯೇ ಮುಂದುವರಿಯಿತು. ಆದರೆ ಸುರೇಶನ ಜೀವನ ಪಿಯುಸಿ ಯಲ್ಲಿ ಯಾರು ಊಹಿಸದ ರೀತಿ ಅನಿರೀಕ್ಷಿತವಾಗಿ ಕೆಳಮುಖವಾಗಿ ತಿರುವು ಪಡೆಯಿತು. ನಾಗೇಶ ಚಿಕ್ಕಂದಿನಲ್ಲಿ ಎಲ್ಲರೂ ಊಹಿಸಿದಂತೆ ಪಿಯುಸಿ ಯಲ್ಲಿ ಕಷ್ಟಪಟ್ಟು ಓದಿ ಪಾಸಾಗಿ ವೈದ್ಯಕೀಯ ಸೀಟನ್ನು ಪಡೆದುಕೊಳ್ಳುತ್ತಾನೆ. ಮುಂದೆ ನಿರಂತರ ಪರಿಶ್ರಮದಿಂದ ವೈದ್ಯನೂ ಆಗಿ ಸರಕಾರಿ ನೌಕರಿಯನ್ನು ಪಡೆದುಕೊಂಡು ತಾನು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವೈದ್ಯನೆಂಬ ಕೀರ್ತಿ ಪ್ರಶಸ್ತಿ ಪಡೆದುಕೊಂಡ.  ಕೆಲವು ವರ್ಷಗಳ ನಂತರ ತಾನು ಕಲಿತ ಶಾಲೆ, ಶಿಕ್ಷಕರು ಸಹಪಾಠಿಗಳು ಹೆಮ್ಮೆಯಿ...
Image
 ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ, ಭಾಗ -2.  ದೃಢ ನಂಬಿಕೆಯಿಂದ ಸಮುದ್ರವನ್ನು ಬತ್ತಿಸುವ ಸಂಕಲ್ಪ ಮಾಡಿದ ಹಂಸ ಪಕ್ಷಿಯ ಕತೆ. ಒಂದು ಹಂಸ ಪಕ್ಷಿ ತನ್ನ ಗುಂಪಿನೊಂದಿಗೆ ಸಮುದ್ರ ದಂಡೆಯಲ್ಲಿ ಸಂತೋಷದಿಂದ ವಾಸಿಸುತ್ತಿತ್ತು. ಸಮುದ್ರದ ದಂಡೆಯಲ್ಲಿ ಚಲಿಸುವಾಗ ಎಷ್ಟೋ ಬಾರಿ ಸಮುದ್ರದ ಅಲೆಗಳ ಪೆಟ್ಟನ್ನು ತಿನ್ನುತ್ತಿತ್ತು. ಸಮುದ್ರದ ಅಲೆಗಳು ಎಷ್ಟೋ ಸಲ ಹಂಸ ಪಕ್ಷಿಯಿಟ್ಟಿದ್ದ ಮೊಟ್ಟೆಗಳನ್ನು ಹೊಡೆದುಕೊಂಡು ಹೋಗಿದ್ದವು. ಆದರೂ ಸಮುದ್ರಕ್ಕೆ ಏನನ್ನು ಹೇಳದೆ, ಉತ್ತಮ ಸಂಬಂಧವನ್ನು ಕಾಯ್ದುಕೊಂಡಿತ್ತು.  (ಆದರೆ ಸಮುದ್ರಕ್ಕೆ ಬಹುಶಃ ಮುದ್ದು ಮುದ್ದಾದ ಅದನ್ನು ಕಂಡರೆ ಏನೇನೋ ತುಂಟಾಟ ಮಾಡಿ ವಿಕೃತ ಖುಷಿ ಪಡುವ ಹಂಬಲವಿತ್ತೇನೋ ?)  ಅನೇಕ ದಿನಗಳ ನಂತರ ಹಂಸ ಪಕ್ಷಿ ಪುನಃ ತನ್ನ ಮೊಟ್ಟೆಗಳನ್ನಿಟ್ಟು ಮರಿ ಮಾಡುವ ಸಂತಾನೋತ್ಪತ್ತಿಯ ಸಮಯ ಬಂದೀತು. ಆಗ ಅದು ಹಿಂದಿನ ಅನುಭವಗಳಿಂದ ಪಾಠ ಕಲಿತು, ಸಮುದ್ರದ ಅಲೆಗಳಿಗೆ ಹೆದರಿ, ಸಮುದ್ರ ದಂಡೆಯಿಂದ ಬಹು ದೂರದಲ್ಲಿ, ಅಲೆಗಳು ತಲುಪಲು ಆಗದ ಸ್ಥಳವನ್ನು ಹುಡುಕಿ, ಆ ಸ್ಥಳದಲ್ಲಿ ತನ್ನ ಮೊಟ್ಟೆಗಳನ್ನು ಇಟ್ಟಿತ್ತು.  ಮೊಟ್ಟೆ ಇಟ್ಟ ನಂತರ ಹಂಸ ಪಕ್ಷಿ ಅದರಿಂದ ಹೊರಬರುವ ತನ್ನ ಮುದ್ದು ಕಂದಮ್ಮಗಳನ್ನು ನೆನೆದು ಪುಳಕಗೊಳ್ಳುತ್ತಿರುತ್ತದೆ. ಅವುಗಳ ಚಿನ್ನಾಟಗಳನ್ನು ಕಲ್ಪಿಸಿಕೊಂಡು ಮನಸ್ಸಿನಲ್ಲಿಯೇ ಖುಷಿ ಪಡುತ್ತಿರುತ್ತದೆ.‌ ಯಾವಾಗ ಮೊಟ್ಟೆಯಿಂದ ಮರಿಗಳು ಪುಟ್ಟ ಪುಟ್ಟ ಹ...
Image
 *ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ.*  (ಜೀವನದ ಒಂದು ಘಟನೆ ಆಧಾರಿತ ಲೇಖನ. ) *ಭರವಸೆ ಎನ್ನುವುದು ಜೀವನ.*  *ಭರವಸೆ, ಕಳೆದುಕೊಳ್ಳುವುದೇ ಸಾವು.*  *ಭರವಸೆ ಎನ್ನುವುದು ಭವಿಷ್ಯದ ಆಶಾ ಕಿರಣ*.  *ಭರವಸೆ ಕಳೆದುಕೊಳ್ಳುವುದು ದಾರಿ ಕಾಣದ ಕಗ್ಗತ್ತಲು.*  ನಾವು ರಾತ್ರಿ ಮಲಗುವುದು ಸಹ ನಾಳೆ ನಾನು ಜೀವಂತವಾಗಿ ಏಳುತ್ತೇನೆ, ಎನ್ನುವ ಭರವಸೆಯಿಂದಲೇ.  ನಾವು ಬಸನ್ನು ಹತ್ತುವುದು, ಟ್ರೈನನ್ನು ಹತ್ತುವುದು ಸಹ ಡ್ರೈವರ್ ನಮ್ಮನ್ನು ಸುರಕ್ಷಿತವಾಗಿ ನಮ್ಮ ನಿಲ್ದಾಣ ತಲುಪಿಸುತ್ತಾನೆ, ಎನ್ನುವ ಭರವಸೆಯಿಂದ. ಭರವಸೆ ಎಲ್ಲರ ಜೀವನದಲ್ಲಿ ಬಹು ದೊಡ್ಡ ಪಾತ್ರವನ್ನು ನಿಭಾಯಿಸುತ್ತದೆ. ಇಂತಹ ಭರವಸೆಯನ್ನು ನಾವು ಯಾವಾಗಲೂ ಕಳೆದುಕೊಳ್ಳಬಾರದು.  *ನಮ್ಮ ಮೇಲೆ ಬೇರೆ ಯಾರಾದರೂ ಒಳ್ಳೆಯ ಭರವಸೆ ಇಟ್ಟಿದ್ದಾರೆ, ಅಂದಾಗ ನಾವು ಎಂದೆಂದಿಗೂ ಅದನ್ನು ಕಳೆದುಕೊಳ್ಳಬಾರದು. ಅವರ ಭರವಸೆಗೆ ಮೋಸ ಮಾಡಬಾರದು.*  ಇದಕ್ಕೆ ಸಂಬಂಧಿಸಿದಂತೆ ನನ್ನ ಜೀವನದ ಎರಡು ದಶಕಗಳ ಹಿಂದಿನ ಶಾಲಾ ಜೀವನದ ಆ ಘಟನೆಯನ್ನು ನೆನಪಿಸಿಕೊಂಡಾಗ ಆ ಸಮಯ *"ಭರವಸೆಗೆ ಸಂಬಂಧಿಸಿದಂತೆ"* ಎಷ್ಟೊಂದು ಭಯಾನಕವಾಗಿತ್ತು ? ಎನಿಸುತ್ತದೆ.  ದೇವರು ನನ್ನನ್ನು ನನ್ನ ವ್ಯಕ್ತಿತ್ವದ ಕೊಲೆಯಿಂದ ರಕ್ಷಿಸಿದನಲ್ಲ, ಎಂದು ದೇವರ ಬಗ್ಗೆ ನನ್ನಿಂದ ಈಗಲೂ ಕೃತಜ್ಞತೆ ಹೊರ ಹೊಮ್ಮುತ್ತದೆ. ನಾನು ಆರನೇ ತರಗತಿಯಲ್ಲಿರುವಾಗ ನಮ್ಮ ಶಿಕ್ಷಕರು, ನಿ...
 ಯಾವುದರ ರಕ್ಷಣೆ ಈ ಸಮಯದ ಅವಶ್ಯಕತೆ ? ಈ ಸಮಯದ ಅವಶ್ಯಕತೆಯನ್ನು ರಕ್ಷಿಸಲು ಸಾಧ್ಯವೇ ? ಇಂದಿನ ನಮ್ಮ ದೇಶದ, ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧ, ಧಾರ್ಮಿಕ ಉನ್ಮಾದ, ಪ್ರಕೃತಿ ವಿಕೋಪ ಮುಂಬರುವ ಜಗತ್ತು ಹೇಗಿರಬಹುದು ? ಯಾವ ರೀತಿ ಇರಬಹುದು ? ಎನ್ನುವ ಬಗ್ಗೆ ಒಂದು ಸೂಕ್ಷ್ಮ ಚಿತ್ರಣ ಕೊಡುತ್ತಿದೆ. ಈ ಚಿತ್ರಣ ಬಹಳವೆಂದರೆ, ಬಹಳ ಭಯಾನಕವಾಗಿದೆ. ಇದು ಹಾಗೆಯೇ ಮುಂದುವರಿದಲ್ಲಿ ಇನ್ನೂ ಕೆಲವು ಶತಮಾನಗಳಲ್ಲಿ ಮನುಷ್ಯ ಸಂತತಿ ಭೂಮಿಯ ಮೇಲೆ ಉಳಿಯಬಹುದೇ ? ಎನ್ನುವ ಕುರಿತು ಸಂದೇಹ ವ್ಯಕ್ತವಾಗುತ್ತದೆ. ಇದಕ್ಕೆ ಪರಿಹಾರ ಏನು ? ಎನ್ನುವ ಕುರಿತು ಲೇಖನಗಳ ಮೂಲಕ ನನ್ನ  ವಿಚಾರಗಳನ್ನು ವ್ಯಕ್ತಪಡಿಸಿದ್ದೇನೆ. ರಕ್ಷಾ ಬಂಧನದ ಈ ಸಮಯ ವಿಷಯದ ಕುರಿತು ಮತ್ತೆ ಚರ್ಚಿಸಲು ಸುಸಮಯ ಎಂದು ಭಾವಿಸುತ್ತೇನೆ. ಇದು ಭೂಮಿಯ ಮೇಲಿರುವ ಧರ್ಮಗಳಿಗೆ ಅವು ಆರಂಭವಾದ ಸಮಯ ಇದೆ (ಜನಿಸಿದ ದಿನ). ಅಂದರೆ ಆಯಾ ಧರ್ಮದ ಆರಂಭದ ಸಮಯಕ್ಕೂ  ಮೊದಲು ಆ ಧರ್ಮಗಳು ಜಗತ್ತಿನಲ್ಲಿ ಇರಲಿಲ್ಲ.  ಆದರೆ ಹಿಂದೂ ಧರ್ಮಕ್ಕೆ ಯಾವುದೇ ಆರಂಭದ ಸಮಯವಿಲ್ಲ. ಇದರಿಂದ ತಿಳಿಯುವ ವಿಷಯವೇನೆಂದರೆ, ಈಗಿರುವ ಯಾವುದೇ ಧರ್ಮಗಳು ಇಲ್ಲದೆ ಇರುವಾಗಲೂ ಕೇವಲ ಹಿಂದೂ ಧರ್ಮ ಮಾತ್ರ ಇತ್ತು.  ಸಂಸ್ಕೃತದಲ್ಲಿ ಒಂದು ಹೇಳಿಕೆಯಿದೆ, ತೇನ ವಿನಾ ತೃಣಮಪಿ ಚಲತಿ. ಅಂದರೆ, ಆ ಭಗವಂತನ ಇಚ್ಛೆಯಿಲ್ಲದೆ ಒಂದು ಹುಲ್ಲು ಕಡ್ಡಿ ಸಹ ಅಲುಗಾಡುವುದಿಲ್ಲ. ಹಾಗಾದರೆ ವಿಶ್ವದ ಬಹು...
Image
  *ಪ್ರಶ್ನೆ ಎಂದರೇನು ? (ಭಾಗ 2)* ಕಳೆದ ಲೇಖನದಲ್ಲಿ ನಮಗೆ ಗೊತ್ತಿಲ್ಲದೆ ಇರುವುದನ್ನು, ತಿಳಿದವರಿಗೆ ಕೇಳಬೇಕು ಅಥವಾ ಮನಸ್ಸಿನಲ್ಲಿಯೇ ಅದರ ಕುರಿತು ಪ್ರಶ್ನಿಸಬೇಕು ಎಂದು ಹೇಳಲಾಗಿತ್ತು. ಗೊತ್ತಿಲ್ಲದೆ ಇರುವುದರ ಬಗ್ಗೆ, ಬೇರೆಯವರಿಗೆ ಪ್ರಶ್ನಿಸದಿದ್ದರು ಬಹಳಷ್ಟು ಜನ ಮನಸ್ಸಿನಲ್ಲಿಯೇ ಆ ವಿಷಯದ ಕುರಿತು ಪ್ರಶ್ನೆ ಮಾಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ *"ಸಾಧ್ಯವಾದರೆ*", ಅದನ್ನು ಮನಸ್ಸಿನಲ್ಲಿಯೇ ಪ್ರಶ್ನೆ ಮಾಡುವ ಬಗ್ಗೆ ನಾವು ಎಚ್ಚರವಹಿಸಬೇಕು. ಕಾರಣವೇನೆಂದರೆ ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಪ್ರಶ್ನೆ ಮಾಡಿದಾಗ, ಅದು ಮನಸ್ಸಿನಲ್ಲಿ ಮಾಡಿದರೂ ಸಹ, ಜಗತ್ತು ಅದರ ಬಗ್ಗೆ ಉತ್ತರವನ್ನು ನೀಡುತ್ತದೆ. ಉತ್ತರ ನೀಡುವ ಸಮಯದಲ್ಲಿ ಹೆಚ್ಚು ಕಡಿಮೆಯಾಗಬಹುದು. ಆದರೆ ಉತ್ತರ ಸಿಗುವುದಂತು ಗ್ಯಾರಂಟಿ.  *ಇದು ಎಲ್ಲರಲ್ಲಿಯೂ ಘಟಿಸಿರುತ್ತದೆ. ಆದರೆ ಗಮನಿಸಿರುವುದಿಲ್ಲ. ನನ್ನದೆ ಒಂದು ಉದಾಹರಣೆ ಹೇಳುತ್ತೇನೆ. ನಾನು ಚಿಕ್ಕವನಿರುವಾಗ ನನ್ನ ಸುತ್ತಮುತ್ತ ಇರುವ ಸಂಬಂಧಿಕರು, ಸ್ನೇಹಿತರು, ಪರಿಚಿತರು ನನಗೆ ತಲೆ ನೋಯ್ಯುತ್ತಿದೆಯೆಂದು ತಮ್ಮ ದುಃಖ, ನೋವು ತೋಡಿಕೊಳ್ಳುತ್ತಿದ್ದರು.*  ಅನೇಕರು, ಅನೇಕ ಸಲ ಹೀಗೆ ಹೇಳುವುದನ್ನು ಕೇಳಿದ ನಂತರ ನನ್ನ ಮನಸ್ಸಿನಲ್ಲಿ ನಾನು ಕೇಳಿಕೊಂಡ ಪ್ರಶ್ನೆ, ಎಲ್ಲರೂ ತಲೆ ನೋವು, ತಲೆ ನೋವು ಎನ್ನುತ್ತಾರೆ. ಇದರ ಬಗ್ಗೆ ನನಗೆ ಗೊತ್ತೇ ಇಲ್ಲವಲ್ಲ. ತಲೆ ನೋವು ಅಂದರೆ ಹೇಗಿರುತ್ತದೆ ? ಎನ್ನುವ ಪ್ರ...
Image
  *ಒಂದು ಪ್ರಶ್ನೆ,  ಪ್ರಶ್ನೆ ಎಂದರೆ ಏನು ?* ಇದೊಂದು ವಿಚಿತ್ರ ಪ್ರಶ್ನೆ ಎನಿಸಬಹುದು. ಈ ಪ್ರಶ್ನೆ ಕೇಳುತ್ತಿರುವ ಕಾರಣ, ಸಾಮಾನ್ಯವಾಗಿ ನಾನು ಏನಾದರೂ ಜ್ಞಾನದ ವಿಷಯ ಹೇಳುವ ಮುಂಚೆ ಪ್ರಶ್ನೆ ಕೇಳುತ್ತೇನೆ. ಈ ಪ್ರಶ್ನೆ ಕೇಳುವ ಉದ್ದೇಶ ಏನು  ? ಎನ್ನುವುದು ಪ್ರಶ್ನೆ. ಪರಮ ಗುರುಗಳಾದ ಹನುಮಾನ ದೇವರು ತಮ್ಮ ಬ್ರಹ್ಮ ಜ್ಞಾನ ನೀಡುವ ಸಂದರ್ಭದಲ್ಲಿ, ಒಬ್ಬ ಮಾತಂಗ ಪ್ರಶ್ನೆ ಕೇಳುತ್ತಾನೆ. ಆ ಕೂಡಲೇ ಅಲ್ಲಿದ್ದ ಇತರರು ನಗುತ್ತಾರೆ. ಆಗ ಪರಮ ಗುರು, ಹನುಮಾನ  ದೇವರು ನಗುತ್ತಿರುವವರ ಮೇಲೆ ಕೋಪಗೊಳ್ಳುತ್ತಾರೆ. ಕೋಪಗೊಂಡು ಹೇಳುತ್ತಾರೆ, ಒಬ್ಬ ವ್ಯಕ್ತಿ ಕತ್ತಲೆಯ ಕೋಣೆಯಲ್ಲಿ ಇದ್ದಾನೆ, ಎಂದರೆ ಕತ್ತಲೆಯ ಕೋಣೆಯಿಂದ ಹೊರಗೆ ಬರಲು ಒಂದು ಬೆಳಕಿನ ಕಿರಣ ಬೇಕು. ಆ ಬೆಳಕಿನ ಕಿರಣವೇ ಕತ್ತಲೆಯ ಕೋಣೆಯಿಂದ ಹೊರಗೆ ಬರುವ ದಾರಿಯನ್ನು ತೋರಿಸುತ್ತದೆ. ಬಂಧನದಿಂದ ಬಿಡುಗಡೆಯ ಆಶಾವಾದವನ್ನು ತೋರುತ್ತದೆ.  ಪ್ರಶ್ನೆ ಎಂದರೆ ಏನು ? ಎನ್ನುವ ಪ್ರಶ್ನೆಗೆ ಉತ್ತರ    ಅಜ್ಞಾನದ ಕತ್ತಲೆಯ ಕೋಣೆಯಲ್ಲಿ ಬಂಧನದಲ್ಲಿ ಇರುವವನಿಗೆ, ಸ್ವಾತಂತ್ರ್ಯ ಪಡೆದುಕೊಳ್ಳಲು ಇರುವ "ಜ್ಞಾನದ ಬಾಗಿಲೇ" ಪ್ರಶ್ನೆ.  (ಹಾಗೆಯೇ, ಅನ್ಯಾಯ ಅನೀತಿ ಅಧರ್ಮ ಅನಾಚಾರಗಳಲ್ಲಿ ಮುಳುಗಿದವರಿಗೆ ಹಾಗೂ ಅಜ್ಞಾನ ಎನ್ನುವ ನಿದ್ರೆಯಲ್ಲಿ ಮಲಗಿದವರಿಗೆ ಎಚ್ಚರಿಸಲು ಇರುವ ಸಾಧನವೇ ಪ್ರಶ್ನೆ.) ಆದರೆ ಅವಮಾನಕ್ಕೆ ಅಂಜಿ ಬಹಳಷ್ಟು ಜನ ತಮಗೆ ಒಂದು ವಿಷಯದ ಬಗ...

Class of organism

   (#class_of_organisms) (This article is written in response to an article written by someone who said that "anachara" should be accepted as a ritual. The society should accept and respect them. So read the article written by him first. Link to the article 👇) https://kannada.asianetnews.com/women/masturbation-myths-parenting-tips-and-adolescent-girls-sexual-awareness-scllbk Madam G. H, You really saved a girl's life from ruin with your good communication skills. You showed every sympathy of the student and understood her inner mind and gave her good treatment. The words you spoke to that girl (saying masterbation is not wrong) were the need of the hour to bring her back on the right path. Also, you responded with her, embraced her, showed love, showed compassion and care. All these are correct. If you didn't do this, she wouldn't have opened up about herself. Wasn't talking to you freely. Then she realized her problem and could not get her out of that proble...