*ಪ್ರತಿಯೊಬ್ಬ ವ್ಯಕ್ತಿಗೂ ಇರುವ ಋಣದ ಕರ್ತವ್ಯ* ಒಬ್ಬ ವ್ಯಕ್ತಿಗೆ ಅನೇಕ ರೀತಿಯ ಋಣ ಕರ್ತವ್ಯಗಳಿವೆ. ಅವುಗಳಲ್ಲಿ ಈ ಸಂದರ್ಭದಲ್ಲಿ ಮಾಡಬೇಕಿರುವುದು ಪಿತೃ ಋಣ ತೀರಿಸುವ ಕರ್ತವ್ಯ. *ಯಾರು ಪಿತೃ ?* ಈ ಸಂದರ್ಭಕ್ಕೆ ಹೇಳುವುದಾದರೆ, ಅಗಲಿ ಹೋದ ನಮ್ಮ ವಂಶ ವೃಕ್ಷ ದ ಹಿರಿಯರು ಪಿತೃಗಳು. ಅಗಲಿ ಹೋದ ಸಹೋದರ ಸಹೋದರಿ ಆಗಿರಬಹುದು. ನಮ್ಮ ತಂದೆ ತಾಯಿ ಇಬ್ಬರ ಕಡೆಯಿಂದ ಇರುವ ನಮ್ಮ ಅಜ್ಜ ಅಜ್ಜಿ ಆಗಿರಬಹುದು. ಇವರನ್ನು ನೆನೆದು ಅವರ ಬಗ್ಗೆ ಸದ್ಭಾವನೆ ಹೊಂದಿ ಅವರ ಸಲುವಾಗಿ ಮಾಡುವ ಕಾರ್ಯವೇ ಪಿತೃ ಕಾರ್ಯ. ಇಂದಿನ ದಿನಗಳಲ್ಲಿ ಅವರು ಮರಣಿಸಿದ ದಿನದಲ್ಲಿ ಅವರನ್ನು ಪುಣ್ಯ ತಿಥಿಯ ಹೆಸರಿನಲ್ಲಿ ನೆನೆಯುವ ಕೆಲಸ ಮಾಡಲಾಗುತ್ತದೆ. ಆದರೆ ಸಾಮೂಹಿಕವಾಗಿ ಅಗಲಿದ ಎಲ್ಲಾ ಹಿರಿಯರನ್ನು ನೆನೆಯುವ ದಿನಗಳೇ ಈಗ ನಡೆಯುತ್ತಿರುವ ಪಿತೃ ಪಕ್ಷ. ಇದು ಬರುವ *21ನೇ ತಾರೀಖು ರವಿವಾರ ಮಹಾಲಯ ಅಮಾವಾಸ್ಯೆ ದಿನದವರೆಗೆ ಇದೆ. ಈ ದಿನವೇ ಸೂರ್ಯಗ್ರಹಣ ವು ಸಹ ಇದೆ*. *ಅಗಲಿದ ನಮ್ಮ ಹಿರಿಯರನ್ನು ಏಕೆ ನೆನೆಯಬೇಕು ?* ಇದಕ್ಕೆ ಹಿರಿಯರು ಹೇಳುವ ಮಾತೆಂದರೆ, ಪಿತೃಗಳ ಶ್ರಾಧ್ಧ ಮಾಡುವುದರಿಂದ ಅವರು ಸಂತೃಪ್ತರಾಗಿ ಹಿರಿಯರು ನಮ್ಮನ್ನು ಆಶೀರ್ವದಿಸುತ್ತಾರೆ. ಇದರಿಂದ ನಮ್ಮ ಮನೆಯ ಕಲಹಗಳು ದೂರವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಅವರ ಆಶೀರ್ವಾದದಿಂದ ನಮ್ಮ ವಂಶ ಮುಂದುವರಿಯುತ್ತದೆ. ಶ್ರಾದ್ಧ ಮಾಡದಿದ್ದರೆ ಅವರು ನಿರಾಶರ...
Posts
Showing posts from October, 2025