Posts

Showing posts from September, 2024
Image
 ಅಲ್ಪ ಕಲ್ಪನೆ ಅಲ್ಪ ಸತ್ಯ - ಭಾಗ 3 (ಜಗತ್ತಿನ ಸಮಸ್ಯೆಗಳು) ಭಾಗ 2ರ ಲಿಂಕ್👇 https://urainpoems.blogspot.com/2024/09/2-4-1-httpsurainpoems.html ದೇಶಮುಖ್ ಸರ್ ಡಾ. ನಾಗೇಶ ಮೊಬೈಲ್ ನಲ್ಲಿದ್ದ ಸುರೇಶನು ಬರೆದ ಶ್ರದ್ಧಾಂಜಲಿ ಕವಿತೆ ಓದಿ ಅನೇಕ ಯೋಚನೆಗಳಲ್ಲಿ ಮುಳುಗಿರುವಾಗಲೇ, *ಆ ಮೋಬೈಲ್ ರಿಂಗ್ ಆಯಿತು ಹಾಗೂ ಅದರಲ್ಲಿ R.Chakravarti ಎನ್ನುವ ಹೆಸರು ಇರುವುದನ್ನು ನೋಡಿ ಮೊಬೈಲ್ ನ್ನು ಡಾ. ನಾಗೇಶ ಗೆ ನೀಡಿದರು. ನಾಗೇಶ ಮಾತನಾಡುವುದನ್ನು ಮುಗಿಸಿದ ನಂತರ, ಮಾತನಾಡಿದ್ದು ನಮ್ಮ ರಾಜೇಶ ಅಲ್ಲವೇನು ?* ಎಂದು ಊಹೆ ಮಾಡುತ್ತಾ ದೇಶಮುಖ್ ಸರ್ ಕೇಳಿದರು. ಆಗ ಹೌದು ರಾಜೇಶ್ ಮಾತನಾಡಿದ್ದ. ಒಂದು ಗಂಭೀರ ವಿಷಯದ ಬಗ್ಗೆ ಮಾತನಾಡಲು ಬರುತ್ತೇನೆ ಎಂದು ಹೇಳಿದ್ದಾನೆ, ಎಂದರು. ಡಾ. ನಾಗೇಶ, ಸುರೇಶ, ರಾಜೇಶ ಚಕ್ರವರ್ತಿ ಒಂದೇ ಶಾಲೆ, ಒಂದೇ ಕಾಲೇಜಿನಲ್ಲಿ ಪಿಯುಸಿ ವರೆಗೆ ಕಲಿತವರು. *ನಾಗೇಶ, ಸುರೇಶ ವಿಜ್ಞಾನ ವಿಭಾಗದಲ್ಲಿ ಇದ್ದರೆ, ರಾಜೇಶ ಕಲಾ ವಿಭಾಗದಲ್ಲಿದ್ದ. ಬೇರೆ ಬೇರೆ ವಿಭಾಗವಿದ್ದರೂ ಡಾ. ನಾಗೇಶ, ರಾಜೇಶ ಒಂದು ಸರ್ಕಾರೇತರ ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು*. ಹೀಗಾಗಿ ಅವರಲ್ಲಿ ಆಪ್ತತೆ, ಪರಸ್ಪರ ಗೌರವ ಇತ್ತು.  ಸ್ವಲ್ಪ ಸಮಯದಲ್ಲಿಯೇ, ನಮಸ್ಕಾರ ನಾಗೇಶ ಎಂದು ರಾಜೇಶ ಒಳ ಬಂದರು. ಅಲ್ಲಿಯೇ ದೇಶಮುಖ ಸರ್ ಕುಳಿತಿರುವುದನ್ನು ಕಂಡು ಆಶ್ಚರ್ಯದಿಂದ ನಮಸ್ಕಾರ ಸರ್, ಏನು ನೀವು ಇಲ್ಲಿ !!! ? ಎಂದು ಕೇ...
Image
 ಅಲ್ಪ ಕಲ್ಪನೆ ಅಲ್ಪ ಸತ್ಯ (ಭಾಗ 2) ( ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ -ಸರಣಿಯ 4ನೇ ಲೇಖನ)  ಭಾಗ 1ರ ಲಿಂಕ್ https://urainpoems.blogspot.com/2024/09/1.html ಅಲ್ಪ ಸಮಯದ ನಂತರ ಡಾ. ನಾಗೇಶ ತಮ್ಮ ಕೊಠಡಿಗೆ ವಾಪಸ್ಸಾದರು. ಆಗ ದೇಶಮುಖ್ ಸರ್, ಸುರೇಶ ಅಲ್ಲ ಎನ್ನುವ ಉತ್ತರವೇ ಬರಲಿ ಎಂದು ಬಯಸುತ್ತಾ, *ಸುರೇಶ ಅಲ್ಲ ತಾನೇ ? ಎಂದು ಡಾ ನಾಗೇಶಗೆ ಕೇಳಿದರು*.  *ಆಗ ಡಾ ನಾಗೇಶ, ಸುರೇಶನೇ ಬಂದಿದ್ದು, ಎಂದು ಹೇಳುತ್ತಿದ್ದರು.... ಅಷ್ಟರಲ್ಲಿಯೇ* ಅವರ ಫೋನ್ ರಿಂಗಣಿಸಿತು. ಇದನ್ನು ಕೇಳಿ ಚಿಂತಾಕ್ರಾಂತರಾದ ದೇಶಮುಖ ಸರ್ ಗಡಿಬಿಡಿಯಿಂದ ಯಾವ ವಾರ್ಡ್ ನಲ್ಲಿ ಇದ್ದಾರೆ ನಾನು ನೋಡುತ್ತೇನೆ ಎಂದು ಎದ್ದು ರೂಮ್ ನ ಹೊರಗೆ ಹೋಗಲು ಅಣಿಯಾದರು. ಆಗ ಡಾ. ನಾಗೇಶ ಫೋನ್ ನಲ್ಲಿ ಮಾತನಾಡುತ್ತಲೇ ಕುಳಿತುಕೊಳ್ಳಿ ಎನ್ನುವಂತೆ ಕೈ ಸನ್ನೆ ಮಾಡಿದರು.  *ಆಗ ದೇಶಮುಖ್ ಸರ್ ಪೇಷಂಟ್ ಸುರೇಶ ಆಗಿರಬಾರದು ಎಂದು ನಾನು ದೇವರಿಗೆ ಬೇಡಿಕೊಂಡದ್ದು ವ್ಯರ್ಥವಾಯಿತು, ಎಂದು ಹಳಹಳಿಸಿದರು*. ಫೋನ್ ನಲ್ಲಿಯ ಮಾತುಕತೆ ಮುಗಿದ ನಂತರ ಡಾ. ನಾಗೇಶ, ದೇಶಮುಖ್ ಸರ್ ಪರಿಸ್ಥಿತಿ ನೋಡಿ, "ಟೆನ್ಷನ್ ಮಾಡಿಕೊಳ್ಳಬೇಡಿ ಸರ್, ನೀವು ಅಂದುಕೊಂಡಂತೆ ಏನು ಆಗಿಲ್ಲ ಸರ್. ಬಂದಿದ್ದು ಸುರೇಶ ಏನೋ ನಿಜ, ಆದರೆ ಸುರೇಶನಿಗೆ ಏನು ಆಗಿರಲಿಲ್ಲ. *ಸುರೇಶನ ಮನೆಯ ಹಿಂದಿನ ಹುಡುಗಿಗೆ ಹಾವು ಕಚ್ಚಿತ್ತು. ಆಕೆಗೆ ಅತ್ಯಲ್ಪ ಸಮಯದಲ್ಲಿ ಚಿಕಿತ್ಸೆ ದೊರೆತಲ್ಲಿ...
Image
  ಅಲ್ಪ ಕಲ್ಪನೆ, ಅಲ್ಪ ಸತ್ಯ ಕಥೆ ಭಾಗ -1 (ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ, ಸರಣಿಯ ಮೂರನೇ ಲೇಖನ.) ನಾಗೇಶ ಮತ್ತು ಸುರೇಶ ಇಬ್ಬರು ಬಾಲ್ಯ ಸ್ನೇಹಿತರು. ಬಾಲ್ಯದಿಂದಲೂ ಇಬ್ಬರೂ ಅನೋನ್ಯ ಸಂಬಂಧವನ್ನು ಹೊಂದಿದವರು. ಓದಿನಲ್ಲಿ, ಕ್ರೀಡೆಯಲ್ಲಿ, ಇನ್ನಿತರ ಸ್ಪರ್ಧೆಗಳಲ್ಲಿ ತರಗತಿ ಮತ್ತು ಶಾಲೆಯಲ್ಲಿಯೇ ಗುರುತಿಸುವಂತಹವರು. ಬೇರೆಯವರಿಗೆ ಒಂದು ರೀತಿ ಪರಸ್ಪರ ಸ್ಪರ್ಧಿಗಳಂತೆ ಕಂಡರು ಸಹ ಎಂದಿಗೂ ತಮ್ಮ ತಮ್ಮಲ್ಲಿ ಮತ್ಸರ ಪಡದೆ ಓದಿನಲ್ಲಿ ಇತರ ವಿಷಯಗಳಲ್ಲಿ ಒಬ್ಬರಿಗೊಬ್ಬರು ಸಹಕಾರ ಕೊಟ್ಟುಕೊಳ್ಳುತ್ತಿದ್ದರು.. ಸುರೇಶ, ನಾಗೇಶನನ್ನು ಆದರ್ಶ ವಿದ್ಯಾರ್ಥಿಯಂತೆ ಕಾಣುತ್ತಿದ್ದ. ನಾಗೇಶ ಸಹ ಕೆಲವು ವಿಷಯಗಳಲ್ಲಿ ಸುರೇಶನನ್ನು ಅನುಸರಿಸುತ್ತಿದ್ದ. ನಾಗೇಶನ ಜೀವನ ಬಾಲ್ಯದಲ್ಲಿ ಎಲ್ಲರೂ ಅಂದುಕೊಂಡಂತೆ ಏರುಗತಿಯಲ್ಲಿಯೇ ಮುಂದುವರಿಯಿತು. ಆದರೆ ಸುರೇಶನ ಜೀವನ ಪಿಯುಸಿ ಯಲ್ಲಿ ಯಾರು ಊಹಿಸದ ರೀತಿ ಅನಿರೀಕ್ಷಿತವಾಗಿ ಕೆಳಮುಖವಾಗಿ ತಿರುವು ಪಡೆಯಿತು. ನಾಗೇಶ ಚಿಕ್ಕಂದಿನಲ್ಲಿ ಎಲ್ಲರೂ ಊಹಿಸಿದಂತೆ ಪಿಯುಸಿ ಯಲ್ಲಿ ಕಷ್ಟಪಟ್ಟು ಓದಿ ಪಾಸಾಗಿ ವೈದ್ಯಕೀಯ ಸೀಟನ್ನು ಪಡೆದುಕೊಳ್ಳುತ್ತಾನೆ. ಮುಂದೆ ನಿರಂತರ ಪರಿಶ್ರಮದಿಂದ ವೈದ್ಯನೂ ಆಗಿ ಸರಕಾರಿ ನೌಕರಿಯನ್ನು ಪಡೆದುಕೊಂಡು ತಾನು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವೈದ್ಯನೆಂಬ ಕೀರ್ತಿ ಪ್ರಶಸ್ತಿ ಪಡೆದುಕೊಂಡ.  ಕೆಲವು ವರ್ಷಗಳ ನಂತರ ತಾನು ಕಲಿತ ಶಾಲೆ, ಶಿಕ್ಷಕರು ಸಹಪಾಠಿಗಳು ಹೆಮ್ಮೆಯಿ...
Image
 ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ, ಭಾಗ -2.  ದೃಢ ನಂಬಿಕೆಯಿಂದ ಸಮುದ್ರವನ್ನು ಬತ್ತಿಸುವ ಸಂಕಲ್ಪ ಮಾಡಿದ ಹಂಸ ಪಕ್ಷಿಯ ಕತೆ. ಒಂದು ಹಂಸ ಪಕ್ಷಿ ತನ್ನ ಗುಂಪಿನೊಂದಿಗೆ ಸಮುದ್ರ ದಂಡೆಯಲ್ಲಿ ಸಂತೋಷದಿಂದ ವಾಸಿಸುತ್ತಿತ್ತು. ಸಮುದ್ರದ ದಂಡೆಯಲ್ಲಿ ಚಲಿಸುವಾಗ ಎಷ್ಟೋ ಬಾರಿ ಸಮುದ್ರದ ಅಲೆಗಳ ಪೆಟ್ಟನ್ನು ತಿನ್ನುತ್ತಿತ್ತು. ಸಮುದ್ರದ ಅಲೆಗಳು ಎಷ್ಟೋ ಸಲ ಹಂಸ ಪಕ್ಷಿಯಿಟ್ಟಿದ್ದ ಮೊಟ್ಟೆಗಳನ್ನು ಹೊಡೆದುಕೊಂಡು ಹೋಗಿದ್ದವು. ಆದರೂ ಸಮುದ್ರಕ್ಕೆ ಏನನ್ನು ಹೇಳದೆ, ಉತ್ತಮ ಸಂಬಂಧವನ್ನು ಕಾಯ್ದುಕೊಂಡಿತ್ತು.  (ಆದರೆ ಸಮುದ್ರಕ್ಕೆ ಬಹುಶಃ ಮುದ್ದು ಮುದ್ದಾದ ಅದನ್ನು ಕಂಡರೆ ಏನೇನೋ ತುಂಟಾಟ ಮಾಡಿ ವಿಕೃತ ಖುಷಿ ಪಡುವ ಹಂಬಲವಿತ್ತೇನೋ ?)  ಅನೇಕ ದಿನಗಳ ನಂತರ ಹಂಸ ಪಕ್ಷಿ ಪುನಃ ತನ್ನ ಮೊಟ್ಟೆಗಳನ್ನಿಟ್ಟು ಮರಿ ಮಾಡುವ ಸಂತಾನೋತ್ಪತ್ತಿಯ ಸಮಯ ಬಂದೀತು. ಆಗ ಅದು ಹಿಂದಿನ ಅನುಭವಗಳಿಂದ ಪಾಠ ಕಲಿತು, ಸಮುದ್ರದ ಅಲೆಗಳಿಗೆ ಹೆದರಿ, ಸಮುದ್ರ ದಂಡೆಯಿಂದ ಬಹು ದೂರದಲ್ಲಿ, ಅಲೆಗಳು ತಲುಪಲು ಆಗದ ಸ್ಥಳವನ್ನು ಹುಡುಕಿ, ಆ ಸ್ಥಳದಲ್ಲಿ ತನ್ನ ಮೊಟ್ಟೆಗಳನ್ನು ಇಟ್ಟಿತ್ತು.  ಮೊಟ್ಟೆ ಇಟ್ಟ ನಂತರ ಹಂಸ ಪಕ್ಷಿ ಅದರಿಂದ ಹೊರಬರುವ ತನ್ನ ಮುದ್ದು ಕಂದಮ್ಮಗಳನ್ನು ನೆನೆದು ಪುಳಕಗೊಳ್ಳುತ್ತಿರುತ್ತದೆ. ಅವುಗಳ ಚಿನ್ನಾಟಗಳನ್ನು ಕಲ್ಪಿಸಿಕೊಂಡು ಮನಸ್ಸಿನಲ್ಲಿಯೇ ಖುಷಿ ಪಡುತ್ತಿರುತ್ತದೆ.‌ ಯಾವಾಗ ಮೊಟ್ಟೆಯಿಂದ ಮರಿಗಳು ಪುಟ್ಟ ಪುಟ್ಟ ಹ...