Posts

Showing posts from February, 2025
Image
  *ವೃತ್ತಿ ಧರ್ಮ* ಜೀವನದಲ್ಲಿ ಎಲ್ಲರೂ ಒಂದೊಂದು ವೃತ್ತಿಗಳನ್ನು ಮಾಡುತ್ತೇವೆ. ನಮ್ಮ ವೃತ್ತಿಗಳನ್ನು ನಾವು ಮಾಡುವುದರಿಂದ ನಮಗೆ ಅದಕ್ಕೆ ಸಂಬಂಧಿಸಿದಂತಹ ಫಲ ಅಥವಾ ವೇತನ ಸಿಗುತ್ತದೆ. ಹೀಗಾಗಿ ನಮ್ಮ ವೃತ್ತಿ ನಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತದೆ, ಅದಕ್ಕೆ ತಕ್ಕಂತೆ ಇತರ ನಿರೀಕ್ಷೆ ಮಾಡದೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ನಾವು ನಮ್ಮ ವೃತ್ತಿ ಧರ್ಮ ಪಾಲಿಸಿದಂತೆ. ಆದರೆ ನಾವು ದಾರಿ ತಪ್ಪುತ್ತಿರುವುದು, ಸಮಾಜ, ದೇಶ ದಾರಿ ತಪ್ಪುತ್ತಿರುವುದು ಇಲ್ಲಿಯೇ. ನಾವು ನಮ್ಮ ಸ್ವಂತ ವೃತ್ತಿ ಮಾಡಲು ಅಡ್ಡಡ್ಡ ನಿರೀಕ್ಷೆಗಳನ್ನು ವೃತ್ತಿಗೆ ಸಂಬಂಧಿಸಿದವರಿಂದ ಇಟ್ಟುಕೊಳ್ಳುತ್ತೇವೆ. ಈ ಕಾರಣದಿಂದಲೇ ಇಂದು ಎಲ್ಲೆಡೆ ಭ್ರಷ್ಟಾಚಾರ, ಲಂಚ, ಅನಾಚಾರಗಳು ತಾಂಡವವಾಡುತ್ತಿದೆ. ಯಾರಿಗೂ ಸರಿಯಾದ ರೀತಿಯಲ್ಲಿ ಸರ್ಕಾರದ ಸೇವೆಗಳಾಗಲಿ, ಇನ್ನಿತರ ಉದ್ದೇಶಗಳ ಸೇವೆಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಇದರಿಂದ ವ್ಯಕ್ತಿ ತನ್ನ ದೃಷ್ಟಿಯಲ್ಲಿ ಚಿಕ್ಕವನಾಗುತ್ತಾನೆ. ಸಮಾಜ, ದೇಶ, ದೇವರ ದೃಷ್ಟಿಯಲ್ಲಿಯೂ ದೋಷಿಗಳಾಗುತ್ತೇವೆ. ಇದನ್ನು ಹೇಳಲು ಕಾರಣ ಇಂದಿನ ಒಂದು ಘಟನೆ ಒಬ್ಬರ ಜೀವನದ ಭೂತಕಾಲಕ್ಕೆ ಕರೆದುಕೊಂಡುಹೋಯಿತು. ಅದು ಬಹುಶಃ ಇಪ್ಪತ್ತು ವರ್ಷಗಳ ಹಿಂದಿನ ವಿಷಯ. ಆತ ಡಿಗ್ರಿ ಓದುತ್ತಿದ್ದ ಸಮಯ. ದೇಹದ ಅನಾರೋಗ್ಯದ ಸಮಸ್ಯೆ ಆತನನ್ನು ಕಾಡುತ್ತಿತ್ತು. ಆಗ ಒಂದು ನಡು ರಾತ್ರಿ ಒಮ್ಮಿಂದೊಮ್ಮೆಲೆ ಸಮಸ್ಯೆ ಉಲ್ಬಣವಾಯಿತು. ಆ ಕುಟುಂಬದವರೆಲ್ಲರೂ ಗಾಬರಿಯಾದರು....
Image
  *ಶಾಲೆ ಎಂದರೆ ಏನು ? ಶಾಲೆ ಎಂದರೆ ಯಾವ ಮನೋಭಾವ ವಿದ್ಯಾರ್ಥಿಗಳಲ್ಲಿ ಇರಬೇಕು ?* ನಾವು ಶಾಲೆ ಕಲಿಯುವಾಗ ಶಾಲೆ ಎಂದರೆ ಜ್ಞಾನದ ದೇಗುಲ. ಕೈ ಮುಗಿದು ಒಳಗೆ ಬಾ ಎಂದು ಹೇಳುತ್ತಿದ್ದರು. ವಿದ್ಯಾರ್ಥಿಗಳಿಗೂ ಸಹ ಶಾಲೆಯೆಂದರೆ ವಿದ್ಯೆ, ಶಿಕ್ಷಣ ಪಡೆಯುವ ಸ್ಥಳವಾಗಿತ್ತು. (ಇನ್ನೂ ಕೆಲವರಿಗೆ ಶಾಲೆ ಎಂದರೆ ಶಿಕ್ಷೆ ಸಿಗುವ ಸ್ಥಳ ಎನ್ನುವ ಭಯದ ಭಾವನೆಯಿತ್ತು. ) ಆದರೆ ಇಂದು ವಿಧ್ಯೆ ಶಿಕ್ಷಣಕ್ಕಿಂತಲೂ ಬೇರೆ ವಿಷಯಗಳು ಶಾಲೆಗಳಲ್ಲಿ ಮೇಲುಗೈ ಪಡೆಯುತ್ತಿವೆ. ಇದಕ್ಕೆ ಕಾರಣ ಇಂದಿನ ವಾತಾವರಣ, ಪರಿಸರ, ಚಲನಚಿತ್ರಗಳು, ಪಾಶ್ಚಾತ್ಯ ಸಂಸ್ಕೃತಿ.  ವಿದ್ಯಾರ್ಥಿಗಳಲ್ಲಿ ಈಗಿರುವ ಮನೋಭಾವಕ್ಕೆ ಏನೇನೋ ಕಾರಣವಾಗಿರಬಹುದು. ಆದರೆ ಸಮಾಜದ ಪ್ರಜ್ಞಾವಂತ ಜನರು ಕ್ರಿಯಾಶೀಲರಾಗಿದ್ದಲ್ಲಿ. ಶಾಲೆಯ ಬಗ್ಗೆ ತಪ್ಪು ಮನೋಭಾವ ದೂರ ಮಾಡುವುದು ಸಾಧ್ಯವಿದೆ.  ಈ ಲೇಖನ ಬರೆಯುತ್ತಿರುವುದಕ್ಕೆ ಕಾರಣ, ಇತ್ತೀಚೆಗೆ ನಾನು ನೋಡಿದ ಹತ್ತನೇ ತರಗತಿಯ ಬೀಳ್ಕೊಡುಗೆ ಸಮಾರಂಭದ ಒಂದು ವಿಡಿಯೋ.  ಈ ಹಿಂದೆ ಬೀಳ್ಕೊಡುಗೆ ಸಮಾರಂಭದಲ್ಲಿ ನಮಗೆ ಮಾತನಾಡಲು ಹೇಳಿದಾಗ ಶಾಲೆಯ ಶಿಕ್ಷಕರು, ಶಾಲೆಯ ಪರಿಸರ ಶಾಲೆ ನನಗೆ ಎಷ್ಟು ಸಹಾಯ ಮಾಡಿತು, ಎನ್ನುವುದರ ಕುರಿತು ನಾವು ಮಾತನಾಡುತ್ತಿದ್ದೆವು.  ಆದರೆ ಒಂದು ಸರ್ಕಾರಿ ಶಾಲೆಯ ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದು ಎಲ್ಲಾ ಪ್ರಜ್ಞಾವಂತ ನಾಗರಿಕರು ಗಂಭೀರವಾಗಿ ಚಿಂತಿಸಬೇಕಾಗಿದೆ.  ಆ ವಿಧ್ಯಾ...
Image
  ಕುಂಭ ಮೇಳ  ಯುವಕರು ಮಕ್ಕಳಿರುವಾಗ ದೇವರಂತೆ ಇರುತ್ತಾರೆ. ಯೌವನಕ್ಕೆ ಕಾಲಿಟ್ಟ ಕೂಡಲೇ ಇಂದಿನ ಪರಿಸರ ವಾತಾವರಣದ ಪ್ರಭಾವದಿಂದ ಬೇರೆಯೇ ಆಗುತ್ತಿದ್ದಾರೆ. ದುಶ್ಚಟ ಹೊಂದಿದ ಜನರ ಸಹವಾಸ. ದುಶ್ಚಟಗಳ ಸಂಗ ಮಾಡಿ. ಯೌವನದಲ್ಲಿ ಮುದುಕರಂತೆ ಕಾಣುತ್ತಿದ್ದಾರೆ. ಈಗಿನ ಬಹುತೇಕ ಹುಡುಗರ (ಎಲ್ಲರೂ ಅಲ್ಲ) ಬಾಯಿಯಲ್ಲಿ ಗುಟ್ಕಾ, ಕಣ್ಣಿನಲ್ಲಿ ಮದ್ಯಪಾನದ ನಶೆ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ, ಅವರನ್ನು ಸದಾಚಾರದ ಸನ್ಮಾರ್ಗದ ಕೆಲಸಗಳಲ್ಲಿ ಕಾಣುವುದು ಅಪರೂಪ.  ಅದರಲ್ಲಿಯೂ ಯುವ ಸಮೂಹ ಸದಾಚಾರ, ಸನ್ಮಾರ್ಗದ ಕಡೆ ಆಸಕ್ತಿ ತೋರುವುದು ಸಹ ವಿರಳ. ಯಾವುದೇ ಸದಾಚಾರವು ದೇಹ, ವಚನ, ಮನಸ್ಸು ಈ ಮೂರನ್ನೂ ಒಂದುಗೂಡಿಸಿ ಮಾಡಿದಾಗ ಫಲ ನೀಡುತ್ತದೆ. ದೇವರನ್ನು ತಲುಪುತ್ತದೆ.  ಈ ಮೂರು ಒಟ್ಟಿಗೆ ಇಲ್ಲದಿದ್ದರೂ ಕೇವಲ ಯಾವುದಾದರೂ ಒಂದನ್ನಾದರೂ  ಸನ್ಮಾರ್ಗದಲ್ಲಿ ತೊಡಗಿಸಿದಾಗ, ಸಮಯ ಕಳೆದಂತೆ ಉಳಿದ ಮೂರು ಸಹ ಒಂದುಗೂಡುತ್ತವೆ.  ಹೀಗಾಗಿ ಆರಂಭದಲ್ಲಿ ಕನಿಷ್ಠ ಒಂದು ಅಂತ:ಕರಣ ಉತ್ತಮ ಮಾರ್ಗದಲ್ಲಿದ್ದರೆ ಅದು ದೊಡ್ಡ ಸಾಧನೆಯೇ. ಇದು ಹೇಳುವುದಕ್ಕೆ ಕಾರಣ, 144 ವರ್ಷಗಳಿಗೊಮ್ಮೆ ಬರುವ, ಎರಡು ಪೀಳಿಗೆಯವರಲ್ಲಿ ಒಬ್ಬರು ಮಾತ್ರ ಕಾಣಲು ಸಾಧ್ಯವಾದ ಈಗ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ನನಗೆ ಹೋಗುವ ಮನಸ್ಸಿದ್ದರೂ, ಅವಕಾಶವಿದ್ದರೂ ಕೆಲವು ಕಾರಣಗಳಿಂದ ಹೋಗಲು ಸಾಧ್ಯವಾಗುತ್ತಿಲ್ಲ.  ಆದರೆ ನಮ್ಮ ಬಸವನಗರದ ...
Image
 ಸರಸ್ವತಿ ಮಾತೆ 🙏 ಇಂದು ನಮ್ಮ ಆರಾಧ್ಯೆ ಸರಸ್ವತಿ ಮಾತೆಯ ಪ್ರಕಟವಾದ ದಿನ.  ಯಾವಾಗಲೂ ನನಗೆ, ನನ್ನ ಮೇಲೆ ಸರಸ್ವತಿ ಮಾತೆಯ ಅನಂತವಾದ ಕೃಪೆಯಿದೆ ಅನ್ನಿಸುತ್ತದೆ. ಇಂದು ನಮ್ಮ ಬಳಗ (ಶಿಷ್ಯರು) ನಮ್ಮ ಜೊತೆ ಇಲ್ಲ. ಯಾರು ಇಲ್ಲದೆ ಆ ದೇವಿಯನ್ನು ಇಂದು ಹೇಗೆ ಆರಾಧಿಸಬೇಕು ಎಂದೆ ತಿಳಿಯುತ್ತಿರಲಿಲ್ಲ. ಆಗ ಬಂದ ಯೋಚನೆಯೇ ಈ ಲೇಖನ. ಚಿಕ್ಕಂದಿನಿಂದಲೂ (ಪ್ರಾಥಮಿಕ ಶಾಲೆಯಿಂದಲೂ) ನಾನು ಮೊದಲು ಸ್ನಾನ ಮಾಡಿದ ನಂತರ ದೇವರ ಮನೆಯಲ್ಲಿ ನಮಸ್ಕರಿಸುವುದು ಸರಸ್ವತಿ ಮಾತೆಯನ್ನೆ.  ಈಗ ಇಂದು ಸರಸ್ವತಿ ಮಾತೆಯನ್ನು ಎಲ್ಲಾ ಕಡೆ ಹಂಚಿಕೊಳ್ಳುವುದೇ, ಇಂದಿನ ಒಂದು ರೀತಿಯ ಆರಾಧನೆ ಎಂದು ನಿರ್ಧಾರಕ್ಕೆ ಬಂದಿದ್ದೇನೆ. ಹೀಗಾಗಿ ಈ ಚಿತ್ರವನ್ನು ಎಲ್ಲರಿಗೂ ಕಳುಹಿಸುತ್ತಿದ್ದೇನೆ.  (ಇದರಲ್ಲಿ ಒಂದು ರಹಸ್ಯ ಅಡಗಿದೆ.) ಇದು ಒಂದು ಟಾಸ್ಕ್ ಸಹ ಎಂದು ತಾವು ತೆಗೆದುಕೊಳ್ಳಬೇಕು. ಈಗ ನಾನು ಹಂಚಿಕೊಳ್ಳುತ್ತಿರುವುದು ಏನು ಅನ್ನುವುದನ್ನು ತಾವು ಸೂಕ್ಷ್ಮವಾಗಿ ಗಮನಿಸಿ ಹೇಳಬೇಕು.  ಸೂಕ್ಷ್ಮವಾಗಿ ಗಮನಿಸಿ ನನ್ನ ಪ್ರಶ್ನೆಗೆ ಮನಸ್ಸಿನಲ್ಲಿಯೇ ಉತ್ತರ ಹೇಳಿಕೊಳ್ಳಿ. ಈಗ ತಾವು ಏನನ್ನು ನೋಡುತ್ತಿದ್ದೀರಿ ? ಓದುವುದನ್ನು ಸ್ವಲ್ಪ ನಿಲ್ಲಿಸಿ, ನಾನು ಕಳುಹಿಸಿರುವುದರ ಕಡೆ ನೋಡಿ ಹೇಳಿ. ನೀವು ನೋಡುತ್ತಿರುವುದು ಏನು ? ಸರಸ್ವತಿ ಮಾತೆಯ ಚಿತ್ರವನ್ನು ತಾವು ನೋಡುತ್ತಿರುವಿರಿ, ಎಂದು ಅನಿಸಬಹುದು. ಆದರೆ ಇದು ಸತ್ಯವಲ್ಲ.  ನಿಜಕ್ಕೂ ಸತ್ಯವಾಗ...