Posts

Showing posts from July, 2024
Image
  *ಪ್ರಶ್ನೆ ಎಂದರೇನು ? (ಭಾಗ 2)* ಕಳೆದ ಲೇಖನದಲ್ಲಿ ನಮಗೆ ಗೊತ್ತಿಲ್ಲದೆ ಇರುವುದನ್ನು, ತಿಳಿದವರಿಗೆ ಕೇಳಬೇಕು ಅಥವಾ ಮನಸ್ಸಿನಲ್ಲಿಯೇ ಅದರ ಕುರಿತು ಪ್ರಶ್ನಿಸಬೇಕು ಎಂದು ಹೇಳಲಾಗಿತ್ತು. ಗೊತ್ತಿಲ್ಲದೆ ಇರುವುದರ ಬಗ್ಗೆ, ಬೇರೆಯವರಿಗೆ ಪ್ರಶ್ನಿಸದಿದ್ದರು ಬಹಳಷ್ಟು ಜನ ಮನಸ್ಸಿನಲ್ಲಿಯೇ ಆ ವಿಷಯದ ಕುರಿತು ಪ್ರಶ್ನೆ ಮಾಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ *"ಸಾಧ್ಯವಾದರೆ*", ಅದನ್ನು ಮನಸ್ಸಿನಲ್ಲಿಯೇ ಪ್ರಶ್ನೆ ಮಾಡುವ ಬಗ್ಗೆ ನಾವು ಎಚ್ಚರವಹಿಸಬೇಕು. ಕಾರಣವೇನೆಂದರೆ ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಪ್ರಶ್ನೆ ಮಾಡಿದಾಗ, ಅದು ಮನಸ್ಸಿನಲ್ಲಿ ಮಾಡಿದರೂ ಸಹ, ಜಗತ್ತು ಅದರ ಬಗ್ಗೆ ಉತ್ತರವನ್ನು ನೀಡುತ್ತದೆ. ಉತ್ತರ ನೀಡುವ ಸಮಯದಲ್ಲಿ ಹೆಚ್ಚು ಕಡಿಮೆಯಾಗಬಹುದು. ಆದರೆ ಉತ್ತರ ಸಿಗುವುದಂತು ಗ್ಯಾರಂಟಿ.  *ಇದು ಎಲ್ಲರಲ್ಲಿಯೂ ಘಟಿಸಿರುತ್ತದೆ. ಆದರೆ ಗಮನಿಸಿರುವುದಿಲ್ಲ. ನನ್ನದೆ ಒಂದು ಉದಾಹರಣೆ ಹೇಳುತ್ತೇನೆ. ನಾನು ಚಿಕ್ಕವನಿರುವಾಗ ನನ್ನ ಸುತ್ತಮುತ್ತ ಇರುವ ಸಂಬಂಧಿಕರು, ಸ್ನೇಹಿತರು, ಪರಿಚಿತರು ನನಗೆ ತಲೆ ನೋಯ್ಯುತ್ತಿದೆಯೆಂದು ತಮ್ಮ ದುಃಖ, ನೋವು ತೋಡಿಕೊಳ್ಳುತ್ತಿದ್ದರು.*  ಅನೇಕರು, ಅನೇಕ ಸಲ ಹೀಗೆ ಹೇಳುವುದನ್ನು ಕೇಳಿದ ನಂತರ ನನ್ನ ಮನಸ್ಸಿನಲ್ಲಿ ನಾನು ಕೇಳಿಕೊಂಡ ಪ್ರಶ್ನೆ, ಎಲ್ಲರೂ ತಲೆ ನೋವು, ತಲೆ ನೋವು ಎನ್ನುತ್ತಾರೆ. ಇದರ ಬಗ್ಗೆ ನನಗೆ ಗೊತ್ತೇ ಇಲ್ಲವಲ್ಲ. ತಲೆ ನೋವು ಅಂದರೆ ಹೇಗಿರುತ್ತದೆ ? ಎನ್ನುವ ಪ್ರ...
Image
  *ಒಂದು ಪ್ರಶ್ನೆ,  ಪ್ರಶ್ನೆ ಎಂದರೆ ಏನು ?* ಇದೊಂದು ವಿಚಿತ್ರ ಪ್ರಶ್ನೆ ಎನಿಸಬಹುದು. ಈ ಪ್ರಶ್ನೆ ಕೇಳುತ್ತಿರುವ ಕಾರಣ, ಸಾಮಾನ್ಯವಾಗಿ ನಾನು ಏನಾದರೂ ಜ್ಞಾನದ ವಿಷಯ ಹೇಳುವ ಮುಂಚೆ ಪ್ರಶ್ನೆ ಕೇಳುತ್ತೇನೆ. ಈ ಪ್ರಶ್ನೆ ಕೇಳುವ ಉದ್ದೇಶ ಏನು  ? ಎನ್ನುವುದು ಪ್ರಶ್ನೆ. ಪರಮ ಗುರುಗಳಾದ ಹನುಮಾನ ದೇವರು ತಮ್ಮ ಬ್ರಹ್ಮ ಜ್ಞಾನ ನೀಡುವ ಸಂದರ್ಭದಲ್ಲಿ, ಒಬ್ಬ ಮಾತಂಗ ಪ್ರಶ್ನೆ ಕೇಳುತ್ತಾನೆ. ಆ ಕೂಡಲೇ ಅಲ್ಲಿದ್ದ ಇತರರು ನಗುತ್ತಾರೆ. ಆಗ ಪರಮ ಗುರು, ಹನುಮಾನ  ದೇವರು ನಗುತ್ತಿರುವವರ ಮೇಲೆ ಕೋಪಗೊಳ್ಳುತ್ತಾರೆ. ಕೋಪಗೊಂಡು ಹೇಳುತ್ತಾರೆ, ಒಬ್ಬ ವ್ಯಕ್ತಿ ಕತ್ತಲೆಯ ಕೋಣೆಯಲ್ಲಿ ಇದ್ದಾನೆ, ಎಂದರೆ ಕತ್ತಲೆಯ ಕೋಣೆಯಿಂದ ಹೊರಗೆ ಬರಲು ಒಂದು ಬೆಳಕಿನ ಕಿರಣ ಬೇಕು. ಆ ಬೆಳಕಿನ ಕಿರಣವೇ ಕತ್ತಲೆಯ ಕೋಣೆಯಿಂದ ಹೊರಗೆ ಬರುವ ದಾರಿಯನ್ನು ತೋರಿಸುತ್ತದೆ. ಬಂಧನದಿಂದ ಬಿಡುಗಡೆಯ ಆಶಾವಾದವನ್ನು ತೋರುತ್ತದೆ.  ಪ್ರಶ್ನೆ ಎಂದರೆ ಏನು ? ಎನ್ನುವ ಪ್ರಶ್ನೆಗೆ ಉತ್ತರ    ಅಜ್ಞಾನದ ಕತ್ತಲೆಯ ಕೋಣೆಯಲ್ಲಿ ಬಂಧನದಲ್ಲಿ ಇರುವವನಿಗೆ, ಸ್ವಾತಂತ್ರ್ಯ ಪಡೆದುಕೊಳ್ಳಲು ಇರುವ "ಜ್ಞಾನದ ಬಾಗಿಲೇ" ಪ್ರಶ್ನೆ.  (ಹಾಗೆಯೇ, ಅನ್ಯಾಯ ಅನೀತಿ ಅಧರ್ಮ ಅನಾಚಾರಗಳಲ್ಲಿ ಮುಳುಗಿದವರಿಗೆ ಹಾಗೂ ಅಜ್ಞಾನ ಎನ್ನುವ ನಿದ್ರೆಯಲ್ಲಿ ಮಲಗಿದವರಿಗೆ ಎಚ್ಚರಿಸಲು ಇರುವ ಸಾಧನವೇ ಪ್ರಶ್ನೆ.) ಆದರೆ ಅವಮಾನಕ್ಕೆ ಅಂಜಿ ಬಹಳಷ್ಟು ಜನ ತಮಗೆ ಒಂದು ವಿಷಯದ ಬಗ...

Class of organism

   (#class_of_organisms) (This article is written in response to an article written by someone who said that "anachara" should be accepted as a ritual. The society should accept and respect them. So read the article written by him first. Link to the article 👇) https://kannada.asianetnews.com/women/masturbation-myths-parenting-tips-and-adolescent-girls-sexual-awareness-scllbk Madam G. H, You really saved a girl's life from ruin with your good communication skills. You showed every sympathy of the student and understood her inner mind and gave her good treatment. The words you spoke to that girl (saying masterbation is not wrong) were the need of the hour to bring her back on the right path. Also, you responded with her, embraced her, showed love, showed compassion and care. All these are correct. If you didn't do this, she wouldn't have opened up about herself. Wasn't talking to you freely. Then she realized her problem and could not get her out of that proble...

ಇಂದು ಸೂರ್ಯ ಯಾವ ದಿಕ್ಕಿಗೆ ಉದಯಿಸಿದ್ದಾರೆ ?

Image
  ಪ್ರಶ್ನೆ : ಇಂದು ಹುಣ್ಣಿಮೆ. ಸೂರ್ಯ ದೇವರು ಇಂದು ಯಾವ ದಿಕ್ಕಿಗೆ ಉದಯಿಸಿದ್ದಾರೆ ? ಯಾವ ದಿಕ್ಕಿಗೆ ಅಸ್ತಂಗತರಾಗುತ್ತಾರೆ (ಮುಳುಗುತ್ತಾರೆ)? . . . . . . . ಈ ಪ್ರಶ್ನೆಗೆ ಸರಿಯಾದ ಉತ್ತರಕ್ಕಾಗಿ ಗುರುವಿನ ಅವಶ್ಯಕತೆ ಇದೆ. ಹಲವರು ಯೋಚಿಸಬಹುದು ಇದಕ್ಕೆ ಯಾಕೆ ಗುರು ಬೇಕು ?  ಚಿಕ್ಕ ಮಕ್ಕಳು ಸಹ ಸೂರ್ಯ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುತ್ತಾನೆ, ಎಂದು ಈ ಪ್ರಶ್ನೆಗೆ ಉತ್ತರಿಸುತ್ತಾರೆ. ಆದರೆ ಇಲ್ಲಿಯೇ ಅಜ್ಞಾನ ಇದೆ. ಈ ಅಜ್ಞಾನದ ನಿವಾರಣೆಗಾಗಿಯೇ ಗುರುವಿನ ಅವಶ್ಯಕತೆ ಇದೆ. ಒಂದು ಉದಾಹರಣೆ ನೋಡೋಣ. ನಾಲ್ಕೈದು ಕುರುಡರು ಆನೆ ಹೇಗಿದೆ ? ಎಂದು ಕಂಡುಕೊಳ್ಳಲು ಹೋದರು.  *  ಬಾಲವನ್ನು ಹಿಡಿದಂತಹ ಕುರುಡ ವ್ಯಕ್ತಿ, ಆನೆಯೆಂದರೆ ಉದ್ದಕ್ಕೆ ತೆಳ್ಳಗೆ ಇದೆ, ಎನ್ನುತ್ತಾನೆ.  *  ಸೊಂಡಿಲು ಹಿಡಿದಂತಹ  ಕುರುಡ ವ್ಯಕ್ತಿ ಆನೆಯೆಂದರೆ ಉದ್ದಕ್ಕೆ ಕೊಳಾಯಿಯಂತೆ ಇದೆ ಎನ್ನುತ್ತಾನೆ.   *  ಕಾಲುಗಳನ್ನು ಹಿಡಿದ ಕುರುಡ ವ್ಯಕ್ತಿ ಆನೆಯೆಂದರೆ ಕಂಬದಂತೆ ಇದೆ, ಎನ್ನುತ್ತಾನೆ.  *  ಹೊಟ್ಟೆಯನ್ನು ಹಿಡಿದ ಕುರುಡ ವ್ಯಕ್ತಿ  ಆನೆಯೆಂದರೆ ಸಣ್ಣ ಪರ್ವತದಂತೆ ಇದೆ, ಎನ್ನುತ್ತಾನೆ.  ಇವೆಲ್ಲಾ ಕುರುಡು‌ ವ್ಯಕ್ತಿಗಳ ಪಾಲಿಗೆ ಸತ್ಯವೇ. ಆದರೆ ಕಣ್ಣಿರುವವರಿಗೆ ಇವು ಪೂರ್ಣ ಸತ್ಯವಲ್ಲ. ಕೇವಲ ಭಾಗಶಃ ಸತ್ಯ.  ಈ ಜಗತ್ತಿನಲ್ಲಿ ಭಾಗಶಃ ಸತ್ಯ ಅರಿತಿರುವ ನಾವ...
Image
 ಗುರು ಅಂದರೆ ಯಾರು ? ಸಬ ಧರತಿ ಕಾಗದ ಕರುಂ,  ಲೇಖನಿ ಸಬ ಬನರಾಯ ಸಾತ ಸಮುದ್ರ ಕೀ ಮಾಸಿ ಕರುಂ ಗುರು ಗುಣ ಲಿಖಾ ನ ಜಾಯ ಭಾವಾರ್ಥ ನಮಗೆ ಏನಾದರೂ ಬರೆಯಬೇಕಾದರೆ ಕಾಗದ, ಪೆನ್ನು ಮತ್ತು ಶಾಹಿ ಬೇಕು. ಬರೆಯುವದಕ್ಕೆ  ಪೆಪರಿನ ಕಾಗದಕ್ಕೆ ಬದಲಾಗಿ  ಮನುಷ್ಯ, ಪ್ರಾಣಿ, ಪಶು, ಪಕ್ಷಿ, ಗಿಡ ಮರ ಪರ್ವತ ಹೊಂದಿರುವ ಅತ್ಯಂತ ವಿಶಾಲವಾಗಿರುವ ಇಡೀ ಭೂಮಿಯನ್ನೇ ಕಾಗದವನ್ನಾಗಿ ಮಾಡಿಕೊಂಡರು.... . ಇಡೀ ಜಗತ್ತಿನಲ್ಲಿರುವ ಅಷ್ಟು ಗಿಡ ಮರಗಳನ್ನು ಲೇಖನಿಯನ್ನಾಗಿ ಮಾಡಿಕೊಂಡರು... . ಎಲ್ಲಾ ಏಳು ಸಮುದ್ರದ ನೀರನ್ನೇ ಶಾಹಿಯನ್ನಾಗಿ ಬಳಸಿದರೂ ಸಹ ಗುರುವಿನ ಗುಣವನ್ನು, ಗುರುವಿನ ಮಹತ್ವವನ್ನು, ಗುರುವಿನ ಶ್ರೇಷ್ಠತೆಯನ್ನು ಹೇಳಲು ಸಾಧ್ಯವಿಲ್ಲ.  ಈ ಮಾತನ್ನು ಹೇಳಿದವರು ಯಾರೋ ಸಾಮಾನ್ಯ ವ್ಯಕ್ತಿಯಲ್ಲ. ಸಂತ ಶ್ರೇಷ್ಠರಾದ ಕಬೀರ್ ದಾಸರು ಈ ಮಾತನ್ನು ಹೇಳಿದ್ದಾರೆ. ಅಷ್ಟೊಂದು ಮಹಾನ್ ಶ್ರೇಷ್ಠ ಸಂತರೇ ಹೀಗೆ ಹೇಳಿದ್ದಾರೆಂದರೆ, ಗುರುವಿನ ಮಹತ್ವ ಎಷ್ಟಿರಬಹುದು ? ಎನ್ನುವುದನ್ನು ಯೋಚಿಸಬೇಕಾದ ವಿಷಯ.  ಅಂತಹ ಗುರುವಿಗೆ ನಮ್ಮ ಶ್ರದ್ದಾ, ಭಕ್ತಿ, ಸಮರ್ಪಣೆ, ಧನ್ಯವಾದ ಅರ್ಪಿಸುವ ದಿನವೇ ಗುರು ಪೂರ್ಣಿಮೆ.  ನಮಗೆ ಎರಡು ಕಣ್ಣುಗಳಿವೆ. ಈ ಎರಡು ಕಣ್ಣಿನಿಂದ ನಮಗೆ ಜಗತ್ತಿನ ವಸ್ತುಗಳು ತಿಳಿಯುತ್ತವೆ. ಆದರೆ ಯಾರಿಗೆ ಎರಡು ಕಣ್ಣುಗಳು ಇಲ್ಲ. ಅವರಿಗೆ ಯಾವುದು ತಿಳಿಯುವುದಿಲ್ಲ. ಅವರ ಸಂಪೂರ್ಣ ಜೀವನ ಕತ್ತಲೆಯೇ ಆಗಿರುತ್ತದೆ....
  ಪರಾತ್ಪರ ಪರಬ್ರಹ್ಮ ಪರಮಾತ್ಮ ಪ್ರಣವ ನಾದ ಓಂಕಾರ ಒಂದು ಪ್ರಯೋಗ ಮಾಡಿ. ಒಂದು ಮೂಗಿನ ಹೊಳ್ಳೆಯನ್ನು ಮುಚ್ಚಿ, ನಿಧಾನವಾಗಿ, ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ನಂತರ ಮೆಲ್ಲಗೆ ಇನ್ನೊಂದು ಹೊಳ್ಳೆಯಿಂದ ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ.  ನೀವು ಏನನ್ನು ಗಮನಿಸಿದಿರಿ.  ಉಸಿರನ್ನು ತೆಗೆದುಕೊಳ್ಳುವಾಗ ನಮಗೆ "ಸೋ" ಎನ್ನುವ ಶಬ್ದ ಕೇಳುತ್ತದೆ.  ಉಸಿರನ್ನು ಬಿಡುವಾಗ  "ಹಂ" ಎನ್ನುವ ಶಬ್ದ ಕೇಳುತ್ತದೆ. ಎರಡು ಉಸಿರು ಕೂಡಿದ ಶಬ್ಧವೇ "ಸೋಹಂ". ಸೋಹಂ ಶಬ್ದದಲ್ಲಿ ಸ್ ಮತ್ತು ಹ್ ಇವುಗಳು ವ್ಯಂಜನ. ಈ ವ್ಯಂಜನಗಳನ್ನು ಬಿಟ್ಟು ನೋಡಿದಾಗ ಸೋಹಂ ಶಬ್ದದಲ್ಲಿರುವ ಸ್ವರ ಆಕ್ಷರಗಳನ್ನು ನೋಡಿದಾಗ ಇಲ್ಲಿರುವುದೇ ಓ ಮತ್ತು ಅಂ. ಅದುವೇ ಪರಾತ್ಪರ ಪರಬ್ರಹ್ಮ ಪರಮಾತ್ಮ ಓಂಕಾರ. ಒಬ್ಬ ವ್ಯಕ್ತಿ ಹಿಂದೂ ಆಗಿರಲಿ, ಮುಸ್ಲಿಂ ಇರಲಿ, ಕ್ರಿಶ್ಚಿಯನ್ ಇರಲಿ ಎಲ್ಲರೂ ತಮಗೆ ತಿಳಿಯದೆ ಓಂಕಾರವನ್ನು ಜಪಿಸುತ್ತಾರೆ. ಉಸಿರೇ ಜೀವನ. ಈ ಜೀವನವನ್ನು ನಡೆಸುತ್ತಿರುವವರೇ ಪರಾತ್ಪರ ಪರಬ್ರಹ್ಮ, ಪರಮಾತ್ಮ ಓಂಕಾರ. ಎಲ್ಲರ ಪ್ರತಿಯೊಂದು ಉಸಿರಿನಲ್ಲಿಯೂ ಓಂಕಾರವೇ ಇದೆ.  ಇದಕ್ಕಾಗಿಯೇ ಎಲ್ಲಾ ಆರಾಧನೆಗಳನ್ನು ಓಂಕಾರದಿಂದ ಆರಂಭಿಸುತ್ತಾರೆ.  ಹಿಂದೂಗಳು ಈ ನಾದವನ್ನೆ ಓಂ ಎಂದು ಕರೆದರೆ.  ಮುಸ್ಲಿಂರು  ಆಮೀನ ಎನ್ನುತ್ತಾರೆ.  ಕ್ರಿಶ್ಚಿಯನ್ನರು ಆಮೇನ ಎನ್ನುತ್ತಾರೆ.  ಓಂಕಾರ ಮೂರು ಅಕ್ಷರಗಳನ್ನು ಕೂಡಿ ಆಗ...
  ನಾವು ಏನನ್ನು ಹುಡುಕುತ್ತೇವೆ, ಅದುವೇ ಸಿಗುತ್ತದೆ . ನಾವು ಎಷ್ಟು ವರ್ಷ ಈ ದೇಹದಿಂದ ಜೀವಂತ ಇರಬಹುದು ಎಂದು ಯಾರನ್ನಾದರೂ ಇಂದಿನ ಜಗತ್ತಿನಲ್ಲಿ ಪ್ರಶ್ನಿಸಿದಾಗ ನೂರು ವರ್ಷಗಳ ಒಳಗಡೆಯೇ ಎಲ್ಲರೂ ಹೇಳುತ್ತಾರೆ. ಹಾಗಾದರೆ ನೂರು ವರ್ಷಗಳಿಗಿಂತ ಹೆಚ್ಚಿಗೆ ಬದುಕಲು ಸಾಧ್ಯವಿಲ್ಲವೇ ? ಶ್ರೀಕೃಷ್ಣ 125 ವರ್ಷಗಳವರೆಗೂ ಬದುಕಿದ್ದ. ಈ ವಿಷಯ ಹೇಳಿದಾಗ ಅದು ಪುರಾಣ. ಅದನ್ನು ಯಾರು ನೋಡಿದ್ದಾರೆ? ಎಂದು ಪ್ರಶ್ನಿಸಬಹುದು. ಇನ್ನೂ ಕೆಲವರು ಹಿಮಾಲಯದಲ್ಲಿ ಎಷ್ಟೋ ವರ್ಷಗಳಿಂದ ಬದುಕಿದ್ದಾರೆ. ಅವರ ರಜನಿಕಾಂತ್ ಅಂತಹ ದೊಡ್ಡ ವ್ಯಕ್ತಿಗಳು ಆಶೀರ್ವಾದ ಪಡೆದಿದ್ದಾರೆ. ಹಿಮಾಲಯದ ಈ ವಿಷಯವು ಸಹ ಅನೇಕರಿಗೆ ಆಕಾಶದ ಹೂವಿನಂತೆ ಕಾಣುತ್ತದೆ. ಅವರನ್ನು ನೋಡಿಲ್ಲ. ಆದರೆ ಇಂದು ಯಾವುದೇ ಆಧಾರ ಸಿಗುವುದಿಲ್ಲ. ಹಾಗಾಗಿ ಅಂತಹವರನ್ನು ಹೇಗೆ ನಂಬುವುದು ? ಎನ್ನುವ ವಿಚಾರ. ವಿಶೇಷ ಶಕ್ತಿವುಳ್ಳ ಮಹಾತ್ಮರು ಜನ ವಸತಿಗಿಂತ ದೂರದಲ್ಲಿ ಇರುತ್ತಾರೆ. ಅವರು ಜನರಿಗೆ ಸಾಮಾನ್ಯರಂತೆ ಸಿಗುವುದು ಬಹಳ ಕಡಿಮೆ. ಆದರೆ ಓರ್ವ ಮಹಾ ತಪಸ್ವಿ, ಪವಾಡ ಪುರುಷ, ಜನ ಸಮೂಹದ ಮಧ್ಯೆ ಇದ್ದರು. ಹಾಗೂ ಅವರನ್ನು ಭೇಟಿಯಾಗುವ ಇಚ್ಛೆ ಹೊಂದಿದವರಿಗೆ ಸಹಜವಾಗಿ ಸಿಗುತ್ತಿದ್ದರು.  ಅವರು ದಾಖಲೆಗಳಂತೆ ನಾಲ್ಕು ತಲೆಮಾರಿಗಿಂತ ಹೆಚ್ಚಿನ ಪೀಳಿಗೆಯವರನ್ನು ಭೇಟಿಯಾಗಿದ್ದರು.  (ಆದರೆ ಅದಕ್ಕೂ ಹೆಚ್ಚು ವರ್ಷಗಳಿಂದಲೂ ಅಂದರೆ 500 ಕ್ಕಿಂತ ಹೆಚ್ಚು ವರ್ಷ ಅವರು ಬದುಕಿದ್ದರು ಎಂದು ಹೇಳುತ್...